Monday, November 14, 2011

ಪ್ರವಾಸದ ಮಕ್ಕಳೊಂದಿಗೆ ಮುಖ್ಯಮಂತ್ರಿಗಳು

ಮಂಗಳೂರು,ನವೆಂಬರ್.14:ವಾರ್ತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ವತಿಯಿಂದ
ವಿಶೇಷ ಘಟಕ ಯೋಜನೆ ಯಡಿ ಶೈಕ್ಷ ಣಿಕ ಪ್ರವಾಸ ಹೊರಟ ಪರಿ ಶಿಷ್ಟ ಜಾತಿಯ ವಿದ್ಯಾರ್ಥಿ - ವಿದ್ಯಾರ್ಥಿ ನಿಯ ರನ್ನು ಬೆಂಗ ಳೂರಿ ನಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿ ಗಳು ಇಂದು ಬೆಳಗ್ಗೆ ವಿಧಾನ ಸೌಧದ ಮುಂಭಾ ಗದಲ್ಲಿ ಭೇಟಿ ಯಾಗಿ ಕೆಲವು ಕ್ಷಣ ಗಳನ್ನು ವಿದ್ಯಾರ್ಥಿ ಗಳೊಂ ದಿಗೆ ಕಳೆದು ವಿದ್ಯಾರ್ಥಿ ಗಳ ಮುಂದಿನ ಭವಿಷ್ಯ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿ ಬೀಳ್ಕೊ ಟ್ಟರು.ಕನ್ನಡ ಸಂಸ್ಕೃತಿ ಇಲಾಖಾ ಸಚಿವ ರಾದ ಗೋವಿಂದ ಕಾರಜೋಳ,ವಾರ್ತಾ ಇಲಾಖೆಯ ಕಾರ್ಯದರ್ಶಿ ಬಸವರಾಜ್, ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ಮುದ್ದು ಮೋಹನ್,ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಚಂದ್ರಶೇಖರ ಮೂರ್ತಿ ಮತ್ತಿತರ ಗಣ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.