Monday, November 21, 2011

ಸಂಕಷ್ಟದಲ್ಲಿರುವ ಯುವ ಸಂಘಟನೆಗಳಿಗೆ ಸರ್ಕಾರದ ಪ್ರೋತ್ಸಾಹ;ಜೆ.ಕೃಷ್ಣ ಪಾಲೇಮಾರ್

ಮಂಗಳೂರು,ನವೆಂಬರ್.21:ಅಸಾಧಾರಣ ಪ್ರತಿಭೆಗಳಿದ್ದು,ಸರಿಯಾದ ಅವಕಾಶಗಳು ಸೂಕ್ತ ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು ಶಕ್ತಿ ಇಲ್ಲದೆ, ಸಂಕಷ್ಠದಲ್ಲಿರುವ ಯುವ ಸಂಘಟನೆಗಳಿಗೆ ಸರ್ಕಾರ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸುವ ಮೂಲಕ, ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ನೆರವಾಗಿದೆಯೆಂದು ಜಿಲ್ಲಾ ಉಸ್ತುವಾರಿ ಮತ್ತು ಜೀವಿಶಾಸ್ತ್ರ ,ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಜೆ.ಕೃಷ್ಣಪಾಲೇಮಾರ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಡಳಿತ,ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರ ಆಶ್ರ ಯದಲ್ಲಿ ಏರ್ಪ ಡಿಸಿದ್ದ ಗ್ರಾ ಮೀಣ ಕ್ರೀಡೆ ಯುವಕ ಸಂಘ ಗಳಿಗೆ ಕ್ರೀಡಾ ಸಲ ಕರಣೆ ವಿತ ರಿಸುವ ಕಾರ್ಯ ಕ್ರಮ ಉದ್ಘಾ ಟಿಸಿ ಕ್ರೀಡಾ ಸಲ ಕರಣೆ ವಿತರಿಸಿ ಮಾತನಾಡಿದರು.ಒಂದು ತಾಲೂಕಿಗೆ 24 ಸಂಘಗಳಂತೆ ಜಿಲ್ಲೆಯ ಒಟ್ಟು 120 ಸಂಘಗಳಿಗೆ ರೂ.5000/- ಮೊತ್ತದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದರು. 2012 ರ ಜನವರಿ 16 ರಿಂದ ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವವನ್ನು ಹಮ್ಮಿಕೊಂಡಿದ್ದು,ಈ ಯುವಜನೋತ್ಸವದಲ್ಲಿ ರಾಷ್ಟ್ರಾದ್ಯಂತ ವಿವಿಧ ರಾಜ್ಯಗಳ ಸುಮಾರು 6000 ಕ್ಕೂ ಹೆಚ್ಚು ಯುವ ಪ್ರತಿಭೆಗಳು ಭಾಗವಹಿಸುತ್ತಿವೆ. ಈ ಯುವಜನೋತ್ಸವದ ಯಶಸ್ವಿಗೆ ಮಂಗಳೂರು ನಗರವನ್ನು ಸಿಂಗರಿಸಬೇಕು.ಇಡೀ ರಾಷ್ಟ್ರ ಮಂಗಳೂರು ಕಡೆ ನೋಡುತ್ತಿದೆ. ಆದ್ದರಿಂದ ನಮ್ಮ ನಗರದ ಎಲ್ಲಾ ದೇವಾಲಯ,ಚರ್ಚು,ಮಸೀದಿಗಳು ,ಶಾಲಾ ಕಾಲೇಜುಗಳು,ಪಾರಂಪರಿಕ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ಸಮಾ ರಂಭ ದಲ್ಲಿ ಹಾಜ ರಿದ್ದ ವಿಧಾನ ಸಭೆಯ ಉಪಾ ಧ್ಯಕ್ಷ ರಾದ ಎನ್.ಯೋ ಗೀಶ್ ಭಟ್ ಮಾತ ನಾಡಿ ರಾಷ್ಟ್ರೀ ಯ ಅಂತ ರ್ರಾಷ್ಟ್ರೀಯ ಕ್ರೀಡಾ ಪಟುಗಳು ಸ್ಪರ್ಧೆ ಗಳಲ್ಲಿ ನಿಶ್ಚಿಂತ ವಾಗಿ ಭಾಗ ವಹಿಸಲು ಅವರಿಗೆ ಆರ್ಥಿಕ ಸಹಾಯವನ್ನು ಸಂಘ ಸಂಸ್ಥೆಗಳು,ಜಿಲ್ಲಾಡಳಿತ,ಉದ್ಯಮಿಗಳು, ನೀಡಲು ಮುಂದೆ ಬರಬೇಕೆಂದರು.ಮಂಗಳಾಕ್ರೀಡಾಂಗಣದಲ್ಲಿ ಸಿಂಥೆಟಿಕ್ಸ್ ಟ್ರಾಕ ನ್ನು ಅಳವಡಿಸಲು ಟೆಂಡರ್ ಅಂಗೀಕರಿಸಿದ್ದು ಯುವ ರಾಷ್ಟ್ರೀಯ ಜನೋತ್ಸವದ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಭಟ್ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಎನ್.ಎಸ್.ಚನ್ನಪ್ಪಗೌಡ,ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಜಿಲ್ಲಾ ಪಂಚಾಯತ್ ಉಪಾದ್ಯಕ್ಷೆ ಶ್ರೀಮತಿ ಧನಲಕ್ಷ್ಮಿಜನಾರ್ಧನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್,ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ಕುಮಾರ್ ಮೇನಾಲ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಮುಚ್ಚೂರು ಮುಂತಾದವರು ಹಾಜರಿದ್ದರು.
ಮಂಗಳೂರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರಾದ ಶ್ರೀ ಪಾಶ್ವರ್ ನಾಥ ಸ್ವಾಗತಿಸಿದರೆ, ಕ್ರೀಡಾಧಿಕಾರಿ ಪಾಂಡುರಂಗ ಗೌಡ ವಂದಿಸಿದರು.