Tuesday, November 8, 2011

ಪ್ರಾಥಮಿಕ ಶಾಲಾ ಗ್ರಂಥಾಲಯಗಳಿಗಾಗಿ ಪುಸ್ತಕ ಮೇಳ

ಮಂಗಳೂರು, ನವೆಂಬರ್.08: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ಖರೀದಿಸಲು ಅನುಕೂಲವಾಗುವಂತೆ ಇಂದು ನಗರದ ಡಯಟ್ ಕೊಡಿಯಾಲ್ ಬೈಲ್ ನಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿತ್ತು.


ರಾಜ್ಯ ದಾದ್ಯಂ ತದಿಂದ ಆಗ ಮಿಸಿದ್ದ 88 ಪ್ರಕಾ ಶಕರು ತಮ್ಮ ಪುಸ್ತಕ ಗಳನ್ನು ಮೇಳ ದಲ್ಲಿ ಪ್ರದ ರ್ಶಿಸಿದ್ದು, ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶ್ರೀ ಮತಿ ಶೈಲಜಾ ಭಟ್ ಅವರು ಮೇಳ ವನ್ನು ಉದ್ಘಾ ಟಿಸಿ ದರು. ಉಪಾ ಧ್ಯಕ್ಷ ರಾದ ಶ್ರೀಮತಿ ಧನ ಲಕ್ಷ್ಮಿ ಯವರು, ಸ್ಥಾಯಿ ಸಮಿತಿ ಸದ ಸ್ಯರು ಪುಸ್ತಕ ಮೇಳ ವೀಕ್ಷಿ ಸಿದರು.
ಮಂಗ ಳೂರು ತಾಲೂಕು, ನಗರ, ಮೂಡ ಬಿದ್ರೆ ಇಲ್ಲಿನ 300 ಶಾಲೆಗ ಳವರು ಪುಸ್ತಕ ಮೇಳದ ಪ್ರಯೋ ಜನ ವನ್ನು ಪಡೆದು ಕೊಂಡಿ ದ್ದಾರೆಂದು ಸರ್ವ ಶಿಕ್ಷಣ ಅಭಿಯಾನದ ಯೋಜನಾ ಸಮನ್ವಯಾಧಿಕಾರಿಗಳಾದ ಶಿವಪ್ರಕಾಶ್ ತಿಳಿಸಿದರು.
ಪ್ರಾಥಮಿಕ ಶಾಲೆಗಳ ಜೊತೆಗೆ ಮಾಧ್ಯಮಿಕ ಶಿಕ್ಷಣ ಅಧ್ಯಯನದಡಿ ಪ್ರೌಢಶಾಲೆಗಳಿಗೂ ಅನುದಾನ ಲಭ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಲು ಕ್ರಮವಾಗಿ 3000 ರೂ., ಮತ್ತು 10,000 ದಂತೆ ಒಟ್ಟು 35 ಲಕ್ಷ ರೂ ಅನುದಾನವನ್ನು ಜಿಲ್ಲೆಯ ಎಲ್ಲ ಶಾಲಾ ಎಸ್ ಡಿ ಎಂ ಸಿ ಖಾತೆಗಳಿಗೆ ಬಿಡುಗಡೆಯಾಗಿದೆ.
ಬಂಟ್ವಾಳ,ಬೆಳ್ತಂಗಡಿಯವರಿಗಾಗಿ ಮಧುಕರ ಸಭಾಭವನ ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕದಲ್ಲಿ ನಾಳೆ, ಪುತ್ತೂರು, ಸುಳ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನವೆಂಬರ್ 10ರಂದು ಪುಸ್ತಕಮೇಳ ಆಯೋಜಿಸಲಾಗಿದೆ.
ಶಾಲೆಗಳ ಮುಖ್ಯಶಿಕ್ಷಕರು ಮತ್ತು ಎಸ್ ಡಿ ಎಂ ಸಿಯವರು ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಕ್ಕಳ ಗುಣಾತ್ಮಕ ಶಿಕ್ಷಣದ ಬಲವರ್ಧನೆಗೆ ಸಹಕರಿಸಲು ಯೋಜನಾ ಸಮನ್ವಯಾಧಿಕಾರಿಗಳು ಕೋರಿದ್ದಾರೆ. ಜಿಲ್ಲೆಯ ಒಟ್ಟು 983 ಶಾಲೆಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ.