Friday, November 18, 2011

ಕನ್ನಡ ಅಭಿವೃದ್ಧಿಗೆ ವಿವಿಗಳಿಗೆ ತಲಾ 2 ಕೋ.ರೂ. ಅನುದಾನ ;ಡಿ.ವಿ.ಸದಾನಂದ ಗೌಡ

ಮಂಗಳೂರು,ನವೆಂಬರ್.18: ಕನ್ನಡ ಅಭಿವೃದ್ಧಿಗೆ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ತಲಾ 2 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಶೀಘ್ರದಲ್ಲಿ ತಲಾ 1ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕರ್ನಾಟಕ ಸರ್ಕಾರ ಗಡಿಯಲ್ಲಿರುವ ಯಾವುದೇ ಶಾಲೆಗಳನ್ನಾಗಲೀ ಅಥವಾ ಗಡಿಯಾಚೆಗಿನ ಶಾಲೆಗಳನ್ನಾಗಲೀ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ.ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜನರಿಗೆ ಸ್ಪಷ್ಟಪಡಿಸಿದ್ದಾರೆ.ಅವರು ಇಂದು ಬಂಟ್ವಾಳ ತಾಲ್ಲೂ ಕಿನ ಅಳಿಕೆ ಶ್ರೀ ಸತ್ಯ ಸಾಯಿ ವಿದ್ಯಾ ಸಂಸ್ಥೆ ಗಳ ಪ್ರಾಂಗ ಣದಲ್ಲಿ ಏರ್ಪ ಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ ಳನ ಉದ್ಘಾ ಟಿಸಿ ಮಾತ ನಾಡಿ ದರು.5 ಕ್ಕಿಂತ ಕಡಿಮೆ ಮಕ್ಕ ಳಿರುವ ಗಡಿ ಶಾಲೆ ಗಳನ್ನು ಯಾವ ರೀತಿ ಪರಿ ಗಣಿಸ ಬೇಕು ಎಂಬು ದಕ್ಕೆ ತಾಲೂಕು ಪಂಚಾ ಯತ್ ಮೂಲಕ ನಿರ್ಣಯ ಕೈ ಗೊಳ್ಳಲು ತೀರ್ಮಾ ನಿಸ ಲಾಗಿದೆ ಯೆಂದು ಮುಖ್ಯ ಮಂತ್ರಿ ಗಳು ತಿಳಿ ಸಿದರು.ಡಾ.ಚಿದಾ ನಂದ ಮೂರ್ತಿ ಅವರ ಅಧ್ಯಕ್ಷ ತೆಯಲ್ಲಿ ಕನ್ನಡ ತಂ ತ್ರಾಂಶ ಅಭಿ ವೃದ್ಧಿಗೆ ಟೆಂಡರ್ ಆಹ್ವಾನಿಸಲು ಕ್ರಮ ಕೈಗೊಳ್ಳಲಾಗಿದೆಯೆಂದ ಮುಖ್ಯಮಂತ್ರಿಗಳು, ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಬದುಕು ಎಂಬ ಧೋರಣೆ ಬಿಡಬೇಕೆಂದರು.ಗಡಿ ತಂಟೆಕೋರರನ್ನು ಸಮರ್ಥವಾಗಿ ನಿಗ್ರಹಿಸಲಾಗುವುದೆಂದ ಮುಖ್ಯಮಂತ್ರಿಗಳು ಬೆಳಗಾವಿ ಮಹಾನಗರಪಾಲಿಕೆ ಮಹಾಪೌರರ ಹಾಗೂ ಉಪಮಹಾಪೌರರ ವಿರುದ್ಧ ಕಾರಣ ಕೇಳಿ ನೋಟಿಸನ್ನು ಜಾರಿ ಮಾಡಲಾಗಿದು,ಅವರಿಂದ ಉತ್ತರ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದ ಅವರು ಗಡಿ ವಿಷಯದಲ್ಲಿ ಯಾವುದೇ ರಾಜಿ ಸಂಧಾನಗಳಿಗೆ ಅವಕಾಶವೇ ಇಲ್ಲ ಎಂದರು.
ನೆರೆ ಕೇರಳ ರಾಜ್ಯದೊಂದಿಗೆ ಉತ್ತಮ ಭಾಂದವ್ಯ ಹೊಂದುವ ಸಲುವಾಗಿ ಗಡಿ ಭಾಗದ ಕನ್ನಡ ಶಾಲೆಗಳನ್ನು ಬಲಪಡಿಸುವ ಹಾಗೂ ರಾಜ್ಯ ಯಾತ್ರಾರ್ಥಿಗಳಿಗೆ ಶಬರಿಮಲೆಯಲ್ಲಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 5 ಎಕರೆ ಜಾಗವನ್ನು ನೀಡುವಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿರುವುದಾಗಿ ತಿಳಿಸಿದರು.ಬಂ ಟ್ವಾಳ, ಕಲ್ಲಡ್ಕ,ಅಳಿಕೆ, ವಿಟ್ಲ ಮುಂ ತಾದ ಗ್ರಾ ಮೀಣ ರಸ್ತೆ ಗಳ ಸುಧಾ ರಣೆಗೆ ರೂ. 3,27 ಕೋಟಿ ಬಿಡು ಗಡೆ ಮಾಡ ಲಾಗಿದೆ. ಅಂತೆ ಯೇ ಅಳಿಕೆ,ವಿಟ್ಲ,ಕಲ್ಲಡ್ಕ ಗ್ರಾಮ ಗಳಿಗೆ ಶಾಶ್ವತ ಕುಡಿ ಯುವ ನೀರನ್ನು ನೇತ್ರಾ ವತಿ ನದಿ ಯಿಂದ ಒದಗಿಸುವ ಬಗ್ಗೆ ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ತಮಗೆ ಸಲ್ಲಿಸಿದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳಿಗೆ ಸರ್ಕಾರದ ವತಿಯಿಂದ ರೂ.10ಲಕ್ಷ ನೀಡುವುದಾಗಿ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರನ್ನು ರೂ.10 ಲಕ್ಷ ನೀಡಿ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದೆಂದರು.ಸಮಾ ರಂಭ ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್, ಸಮ್ಮೇ ಳಾನ ಧ್ಯಕ್ಷ ರಾದ ಡಾ. ತಾಳ್ತಜೆ ವಸಂತ ಕುಮಾರ್, ಶಾಸಕ ರಾದ ಬಿ ರಮಾ ನಾಥ ರೈ,ಜಿಲ್ಲಾ ಪಂಚಾ ಯತ್ ಅಧ್ಯಕ್ಷ್ಯೆ ಶ್ರೀಮತಿ ಶೈಲಜಾ ಭಟ್,ಅಂಬಾ ತನಯ ಮುದ್ರಾಡಿ,ವಿಧಾನ ಪರಿ ಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯು.ಗಂಗಾಧರ ಭಟ್ ಅವರು ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಹಿತಿ ಶ್ರೀಮತಿ ಸಾರಾ ಅಬೂಬಕರ್ ಆಶಯ ಭಾಷಣ ಮಾಡಿದರು.ಒಡಿಯೂರು ಶ್ರೀ ಗುರು ದೇವಾನಂಧ ಸ್ವಾಮೀಜಿ ಮಾಣಿಲ, ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮತ್ತು ಕನ್ಯಾನದ ಶಶಿಕಾಂತ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.