Monday, November 14, 2011

' ಕನಕದಾಸರು ದೇವರನ್ನು ಒಲಿಸಿಕೊಂಡ ಶ್ರೇಷ್ಟ ದಾರ್ಶನಿಕ '

ಮಂಗಳೂರು,ನವೆಂಬರ್.14:ದಕ್ಷಿಣ ಕನ್ನಡ ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರಾವಳಿ ಕುರುಬರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕನಕ ದಾಸರ ಜಯಂತಿ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಮಾತ ನಾಡಿದ ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಜಾತಿ ಸಂಘ ರ್ಷಗಳ ವಿರುದ್ದ ಸಾಹಿ ತ್ಯದ ಮೂಲಕ ಜನ ಸಾಮ ನ್ಯರಿಗೆ ಅರ್ಥ ವಾಗುವ ರೀತಿ ಯಲ್ಲಿ ಸಂ ದೇಶ ನೀಡಿದ ಕನಕ ದಾಸರು ಮತ್ತು ಅವರ ಆದರ್ಶ ಗಳು ಸರ್ವ ಕಾಲಿಕ ವಾಗಿವೆ. ಕಲೆದ ನಾಲ್ಕು ವರ್ಷ ಗಳಿಂದ ಕನಕ ದಾಸರ ಜಯಂ ತಿ ಸರ್ಕಾ ರದ ವತಿ ಯಿಂದ ಮಾಡು ತ್ತಿದ್ದು ತಾಲೂಕಿಗೆ 25 ಸಾವಿರ ಮತ್ತು ಜಿಲ್ಲೆಗೆ 50 ಸಾವಿರ ಗಳನ್ನು ಸರ್ಕಾರ ನೀಡು ತ್ತಿದೆ. ಅಲ್ಲದೆ ಕಾಗಿ ನೆಲೆಗೆ ರು.10 ಕೋಟಿ ಗಳನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಹೇಳಿ ದರು. ಬಾಲ ಕೃಷ್ಣ ಶೆಟ್ಟಿ ಅವರು ಕನಕ ದಾಸರ ಸಾಹಿತ್ಯ ಮತ್ತು ಜೀವನ ಬಗ್ಗೆ ಉಪನ್ಯಾಸ ನೀಡಿದರು. ಶಾಸಕರಾದ ಯು.ಟಿ. ಖಾದರ್, ಅಪರ ಜಿಲ್ಲಾಧಿಕಾರಿ ದಯಾನಂದ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇ ಗೌಡ,ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಮಂಗಳ ವೆಂ. ನಾಯಕ್, ಕುರುಬರ ಸಂಘದ ಅಧ್ಯಕ್ಷರಾದ ಡಾ. ಕೆ.ಇ. ಪ್ರಕಾಶ್, ಪದಾಧಿಕಾರಿಗಳಾದ ಹನುಮಂತಪ್ಪ,ಕೆ.ಎಂ. ರಾಜು,ಸಮಾರಂಭದಲ್ಲಿ ಉಪಸ್ಥಿತರಿದ್ದರು.