Friday, November 18, 2011

ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ:ಮುಖ್ಯಮಂತ್ರಿ

ಮಂಗಳೂರು,ನವೆಂಬರ್.18 : ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಮ್ಮ ಸರ್ಕಾರ ಆದ್ಯತೆ ನೀಡಿದ್ದು, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಹೇಳಿದರು.ಅವರಿಂದು ವಿಟ್ಲ ದಲ್ಲಿ ಬಂಟ್ವಾಳ ತಾಲೂಕಿನ ಕಡೂರು ಕಾಂಞ ಗಾಡ್ ರಸ್ತೆಯ ಆಯ್ದ ಭಾಗ ಗಳಲ್ಲಿ ಮರು ಡಾಮರೀ ಕರಣ ಮತ್ತು ಸುರತ್ಕಲ್ -ಕಬಕ ರಸ್ತೆಯ 73.60 ರಿಂದ 76.60ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬಂಟ್ವಾಳ ತಾಲೂಕು ಪುಣಚ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನು ದಾನ ನೀಡ ಲಾಗು ವುದು; 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡ ಲಾಗು ವುದು. ಈಗಾ ಗಲೇ ಜಿಲ್ಲೆಯ ವಿವಿಧ ಕಾಮ ಗಾರಿ ಗಳ ಅಭಿ ವೃದ್ಧಿಗೆ 3.30 ಲಕ್ಷ ರೂ ದುಡ್ಡಿದೆ. ಲೋಕೋ ಪಯೋಗಿ ಇಲಾ ಖೆಗೆ ಜಿಲ್ಲೆಯ ರಸ್ತೆ ಗಳ ಅಭಿ ವೃದ್ಧಿಗೆ 8.5 ಕೋಟಿ ರೂ., ನೀಡ ಲಾಗು ವುದು. ಡಿಸೆಂಬರ್ 30 ರೊಳಗೆ ಎಲ್ಲ ರಸ್ತೆಗಳು ಸಂಪೂರ್ಣ ದುರಸ್ತಿಯಾಗಬೇಕೆಂದ ಮುಖ್ಯಮಂತ್ರಿಗಳು, ಮಾಣಿ-ಸಂಪಾಜೆ ರಸ್ತೆ ಅಭಿವೃದ್ಧಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತೀ 15ದಿನಗಳಿಗೊಮ್ಮೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಬೇಕೆಂದ ಅವರು, ಅಭಿವೃದ್ಧಿ ಕಾಮಗಾರಿಗ ಕೈಗೊಳ್ಳುವಲ್ಲಿ ಹಿಂದೆ ಬಿದ್ದರೆ ಕಾರಣರಾದವರನ್ನು ಕ್ಷಮಿಸುವುದಿಲ್ಲ ಎಂದರು. ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಅಭಿವೃದ್ಧಿಗೆ 120 ಕೋಟಿ ರೂ. ಬಿಡುಗಡೆಯಾಗಿದೆ.ವಿವಿಧ ಯೋಜನೆ ಯಡಿ ಯಲ್ಲಿ ಅಭಿ ವೃದ್ಧಿ ಕಾಮ ಗಾರಿಗೆ ರಾಜ್ಯ ದಲ್ಲಿ ಸಾಕಷ್ಟು ದುಡ್ಡಿದ್ದು ಅಭಿ ವೃದ್ಧಿ ಕಾಮ ಗಾರಿ ಗಳು ತುರ್ತು ಅನು ಷ್ಠಾನದ ಅಗತ್ಯ ವಿದೆ ಎಂದರು. ಇದೇ ಸಂದ ರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಯಿಂದ ವಿಷನ್ 2020 ಡಾಕ್ಯು ಮೆಂಟ್ ನ್ನು ಮುಖ್ಯ ಮಂತ್ರಿ ಗಳು ಬಿಡು ಗಡೆ ಮಾಡಿ ದರು.ಬಂಟ್ವಾಳ ತಾಲೂಕಿನ ಸುರತ್ಕಲ್- ಕಬಕ ರಸ್ತೆಯ ಕಿ.ಮೀ 73.60ರಿಂದ 76.60 ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 240 ಲಕ್ಷ ರೂ. ಅನುಮೋದನೆ ಗೊಂಡಿದೆ. ಬಂಟ್ವಾಳ ತಾಲೂಕಿನ ಕಡೂರು ಕಾಂಞಂಗಾಡ್ ರಸ್ತೆ ಕಾಮಗಾರಿ 184.00 ಯಿಂದ 195.60 ವರೆಗೆ ಕಾಮಗಾರಿಯು 5054 ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿಯಲ್ಲಿ ರೂ. 164.07 ಲಕ್ಷ ರೂ. ಅನುಮೋದನೆಗೊಂಡಿದೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಬಾಲಭವನದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಭಟ್ ಸೇರಿದಂತೆ ಹಲವು ಗಣ್ಯರು , ಅಧಿಕಾರಿಗಳು ಪಾಲ್ಗೊಂಡಿದ್ದರು.