Tuesday, December 27, 2011

ರಾಷ್ಟ್ರೀಯ ಯುವಜನೋತ್ಸವ ಯಶಸ್ಸಿಗೆ ಕ್ಷಣಕ್ಷಣದ ಕಾರ್ಯಕ್ರಮಗಳ ಹೊಣೆಗಾರಿಕೆ

ಮಂಗಳೂರು,ಡಿಸೆಂಬರ್.27:ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 2012 ನೇ ಜನವರಿ 12 ರಿಂದ 16 ರ ವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯ ಕ್ರಮಗಳಿಗೆ ಇಂದಿನ ವರೆಗೂ ಆಗಿರುವ ಸಿದ್ಧತೆ ಗಳ ಕ್ಷಣ ಕ್ಷಣದ(ಮಿನಿಟ್ ಪ್ರೋ ಗ್ರಾಂ)ಕಾರ್ಯ ಕ್ರಮಗಳ ಹೊಣೆ ಗಳ ಕುರಿ ತಂತೆ ಜಿಲ್ಲಾಧಿ ಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ವಿವಿಧ ಸಮಿತಿ ಗಳ ಅಧ್ಯಕ್ಷರ ಸಭೆ ಯಲ್ಲಿ ಚರ್ಚಿ ಸಿದರು.ಸ್ವಾಗತ ಸಮಿತಿ,ನೋಂ ದಣಿ ಸಮಿತಿ, ಸಾರಿಗೆ ಸಮಿತಿ, ಆರೋಗ್ಯ ಸಮಿತಿ,ಆಹಾರ ಸಮಿತಿ,ಸಾಂ ಸ್ಕೃತಿಕ ಸಮಿತಿ,ವೇದಿಕೆ ಸಮಿತಿ,ದೀಪಾ ಲಂಕಾರ ಸಮಿತಿ ಇನ್ನು ಮುಂ ತಾದ ಸಮಿತಿ ಗಳು ಇಲ್ಲಿಯ ವರೆಗೂ ನಡೆಸಿ ರುವ ಸಿದ್ಧತಾ ಪಟ್ಟಿ ಯನ್ನು (ಚೆಕ್ ಲಿಸ್ಟ್) ಪರಿಶೀಲಿಸಿದರು. ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ತಮಗೆ ವಹಿಸಿರುವ ಹೊಣೆಗಾರಿಕೆ ಬಗ್ಗೆ ಉದಾಸೀನತೆಯಿಂದಿರದೇ ಹುರುಪು ಉತ್ಸಾಹದಿಂದ ಉತ್ತಮ ಕಾರ್ಯ ಮಾಡುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಅಧಿಕಾರಿಗಳನ್ನು ಉತ್ತೇಜಿಸಿದರು.
ಯುವಜನೋತ್ಸವ ನಡೆಯುವ ಐದು ದಿನಗಳು ನೀರು,ವಿದ್ಯುತ್ ಸರಬರಾಜು ಅಡೆತಡೆಯಿಲ್ಲದೆ ನಿರಂತರವಾಗಿರುವಂತೆ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ವಹಿಸಲು ಸೂಚಿಸಿದರು.
ತುರ್ತು ಸೇವೆ ಸೇರಿದಂತೆ ಯುವಜನೋತ್ಸವ ಪ್ರತಿನಿಧಿಗಳಿಗೆ ಅಗತ್ಯ ಆರೋಗ್ಯ ಸೇವೆಯನ್ನು ಆದ್ಯತೆ ಮೇಲೆ ಒದಗಿಸಲು ಸರ್ವ ಸನ್ನದ್ಧರಾಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಬಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ವೆಂಕಟೇಶ್,ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವಾ ಮತ್ತಿರರುಹಾಜರಿದ್ದರು.