Thursday, December 29, 2011

ದಕ್ಷಿಣ ಕನ್ನಡ ಆತಿಥ್ಯಕ್ಕೆ ಮಾದರಿಯಾಗಲಿ:ಯೋಗೀಶ್ ಭಟ್

ಮಂಗಳೂರು,ಡಿಸೆಂಬರ್.29: ಮಂಗಳೂರಿನಲ್ಲಿ ಜರುಗಲಿರುವ ರಾಷ್ಟ್ರೀಯ ಯುವಜನೋತ್ಸವದ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 5 ಸಾವಿರ ಯುವ ರಾಯಭಾರಿಗಳಿಗೆ ದಕ್ಷಿಣಕನ್ನಡ ಜಿಲ್ಲೆಯ ಆದರ ಆತಿಥ್ಯಗಳು ಎಂದೆಂದಿಗೂ ನೆನಪಿನಲ್ಲುಳಿಯುವಂತೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆಯೆಂದು ಕರ್ನಾಕ ವಿಧಾನಸಭೆಯ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ತಿಳಿಸಿದ್ದಾರೆ.
ಅವರು ಬುಧವಾರ ದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಇಲ್ಲಿಯವರೆಗೂ ಆಗಿರುವ ಸಿದ್ಧತೆಗಳ ಪರಿಶೀಲನೆ ಮಾಡಿ ಮಾತನಾಡಿದರು.ಮುಖ್ಯವಾಗಿ ಆಹಾರ,ತಿಂಡಿ,ಶೌಚಾಲಯ ವ್ಯವಸ್ಥೆ, ಸ್ನಾನ ಸೌಲಭ್ಯ ,ಸಾರಿಗೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ನಿಗಾವಹಿಸಬೇಕೆಂದರು.ಮಂಗ ಳೂರು ನಗರದ ಜನತೆ ಇದೊಂ ದು ಸರ್ಕಾರಿ ಕಾರ್ಯ ಕ್ರಮ.ಇದ ರಲ್ಲಿ ನಮ್ಮ ಪಾಲೂ ಏನೂ ಇಲ್ಲ ಎಂಬ ತಾ ತ್ಸಾರ ಮನೋ ಭಾವನೆ ತಾಳದೆ, ನಮ್ಮ ಊರಿಗೆ ಇಡೀ ರಾಷ್ಟ್ರದ ವಿವಿಧ ರಾಜ್ಯ ಗಳ ಯುವ ಸಾಂ ಸ್ಕೃತಿಕ ರಾಯ ಭಾರಿ ಗಳು ಆಗಮಿ ಸುತ್ತಿ ದ್ದಾರೆ. ಅವರು ನಮ್ಮ ಅತಿಥಿ ಗಳು ಎಂಬು ದಾಗಿ ಭಾವಿಸಿ ಹಬ್ಬದ ವಾತಾ ವರಣ ಏರ್ಪ ಡುವಂತೆ ಮನೆ ಮನೆ, ಅಂಗಡಿ ಮುಗ್ಗಟ್ಟು ಗಳನ್ನು, ಪೂಜಾ ಮಂದಿರಗಳನ್ನು, ವಿದ್ಯುತ್ ದೀಪಗಳಿಂದ ಅಲಂಕರಿಸಲು ಅವರು ವಿನಂತಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪೆರುವಾಳ್ ರವರು ಈ ಸಂದರ್ಭದಲ್ಲಿ ಮಾತನಾಡಿ ಇಲ್ಲಿಯ ವರೆಗೂ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಿರುವ ತಯಾರಿಗಳು ತೃಪ್ತಿದಾಯಕವಾಗಿದೆ.ಅಧಿಕಾರಿಗಳ ತಂಡ ಸ್ಪೂರ್ತಿಯಿಂದ ಕೆಲಸಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಯುವಜನೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೆ ಸೂಕ್ತವಾದ ಸ್ಮರಣಿಕೆಗಳನ್ನು ನೀಡಲು ಖಾಸಗಿ,ರಾಷ್ಟ್ರೀಕೃತ ಬ್ಯಾಂಕುಗಳು,ಸಂಘಸಂಸ್ಥೆಗಳ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಮನವೊಲಿಸಲು ಸಭೆಯಲ್ಲಿ ಹಾಜರಿದ್ದ ಜನ ಪ್ರತಿನಿಧಿಗಳನ್ನು ಕೋರಿದರು.
ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಯುವಜನೋತ್ಸವ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡರು ಇಲ್ಲಿಯವರೆಗೂ ಆಗಿರುವ ಸಿದ್ಧತೆಗಳು ಹಾಗೂ ಯುವಜನೋತ್ಸವ ಕಾರ್ಯಕ್ರಮಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು. ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎನ್.ಶೈಲಜಾ ಭಟ್,ಶಾಸಕ ಅಭಯಚಂದ್ರ ಜೈನ್,ಯುವಜನೋತ್ಸವ ಸಮಿತಿಗಳ ಅಧ್ಯಕ್ಷರು ಹಾಜರಿದ್ದರು.