Wednesday, December 14, 2011

ಭ್ರೂಣ ಹತ್ಯೆಗೆ ಜನಜಾಗೃತಿಯೇ ಪರಿಹಾರ :ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.14: ಜನಜಾಗೃತಿಯಿಂದ ಮಾತ್ರ ಭ್ರೂಣಹತ್ಯೆ ತಡೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994 ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಗಂಡು ಮಕ್ಕಳ ಬಗ್ಗೆ ಸಾಮಾ ಜಿಕ ವಾಗಿ ಎಲ್ಲ ರಲ್ಲೂ ಇರುವ ಹೆಚ್ಚು ಪ್ರೀತಿ ಹಾಗೂ ಹೆಣ್ಣು ಮಕ್ಕಳ ಕುರಿ ತಿರುವ ತಾತ್ಸಾರ ನಿವಾ ರಣೆಗೆ ಸರ್ಕಾ ರೇತರ ಸಂಘ ಸಂಸ್ಥೆ ಗಳು ಆರೋಗ್ಯ ಇಲಾಖೆ ಯೊಂದಿಗೆ ಕೈ ಜೋಡಿಸ ಬೇಕೆಂದ ಅವರು, ಲಿಂಗ ತಾರ ತಮ್ಯ ಒಂದು ಸಾಮಾ ಜಿಕ ಪಿಡು ಗೆಂದರು.ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದ ಅವರು, ಕಾಯಿದೆಯನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.ಹೆಣ್ಣು ಮಕ್ಕ ಳಿಗಾಗಿ ಸ ರ್ಕಾರ ಭಾಗ್ಯ ಲಕ್ಷ್ಮಿ ಯಂತಹ ಉತ್ತಮ ಯೋಜನೆ ಗಳನ್ನು ಜಾರಿಗೆ ತಂದಿ ದ್ದು ಸಾಮಾ ಜಿಕ ವಾಗಿ ನಮ್ಮಲ್ಲಿ ಮಹಿಳೆ ಯರಿಗೆ ಉತ್ತಮ ಸ್ಥಾನ ಮಾನ ಹಾಗೂ ಭದ್ರತೆ ಯನ್ನು ಒದ ಗಿಸ ಲಾಗಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಡಿ.ಎಚ್.ಒ ಡಾ. ಓ ಆರ್ ಶ್ರೀರಂಗಪ್ಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಅವರು ಸ್ವಾಗತಿಸಿದರು. ಜಯರಾಮ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.