Thursday, December 15, 2011

ಯುವಜನೋತ್ಸವ: ಕಚೇರಿ ಉದ್ಘಾಟನೆ

ಮಂಗಳೂರು,ಡಿಸೆಂಬರ್.15:ಮಂಗಳಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ ಕಚೇರಿ (ಕ್ಯಾಂಪ್ ಆಫೀಸ್)ಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್. ಎಸ್. ಚನ್ನಪ್ಪಗೌಡ ಅವರು ಉದ್ಘಾಟಿಸಿದರು.
ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಎಲ್ಲ ಚಟು ವಟಿಕೆ ಗಳು ಇಲ್ಲಿ ನಡೆ ಯಲಿದ್ದು, ಮಂಗಳಾ ಸ್ಟೇಡಿ ಯಂನ ಒಳಾಂ ಗಣ ದಲ್ಲೂ ಕಂಟ್ರೋಲ್ ರೂಂ ನ್ನು ಸ್ಥಾಪಿ ಸಲಾಗಿದೆ. ಈ ಕಚೇರಿ ಯಲ್ಲೇ ಇನ್ನು ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಸಭೆ ಗಳು, ಕ್ರಿಯಾ ಯೋಜನೆ ಗಳು ನಡೆ ಯಲಿವೆ. ಸಾರ್ವ ಜನಿಕರು ಇಲ್ಲಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪಾಶ್ವನಾಥ್ ಉಪಸ್ಥಿತರಿದ್ದರು.