Monday, December 12, 2011

ನಂದಿನಿಯಿಂದ ಜಿಲ್ಲಾ ಮಟ್ಟದ ಚಿತ್ರ ಮತ್ತು ಭಾವಗೀತೆ ಸ್ಪರ್ಧೆ

ಮಂಗಳೂರು,ಡಿಸೆಂಬರ್.11: ಹೈನುಗಾರಿಕೆ ಹಾಗೂ ಹಾಲಿನ ಉಪಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.ಭಾನು ವಾರ ನಗರದ ಕೊಡಿ ಯಾಲ್ ಬೈಲ್ ಶಾರದಾ ವಿದ್ಯಾ ಲಯ ದಲ್ಲಿ ಜಿಲ್ಲಾ ಮಟ್ಟದ ಚಿತ್ರ ರಚನೆ ಸ್ಪರ್ಧೆ ಮತ್ತು ಭಾವ ಗೀತೆ ಸ್ಪ ರ್ಧೆಯ ಸಮಾ ರೋಪ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಚಿತ್ರ ರಚನೆ ಯಲ್ಲಿ 127 ಮತ್ತು ಭಾವ ಗೀತೆ ಯಲ್ಲಿ 60 ಮಕ್ಕಳು ಎಲ್ಲ ತಾಲೂಕು ಗಳಿಂದ ವಿವಿಧ ಶಾಲೆ ಗಳ ಮಕ್ಕಳು ಭಾಗ ವಹಿ ಸಿದ್ದರು.
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಪ್ರತಿಭಾನೇಷ್ವಣೆಗಳು ಹೆಚ್ಚುತ್ತಿದ್ದು, ನಂದಿನಿಯವರು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಹೈನುಗಾರಿಕೆ ಮತ್ತು ಗ್ರಾಮೀಣ ಬದುಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನವಾಗುತ್ತಿದೆ ಎಂದರು. ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಹೈನುಗಾರಿಕೆ ಯಿಂದ ಅಭಿವೃದ್ಧಿ ಹೊಂದಿದ ಮಾದರಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ನಂದಿನಿಯ ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್ ಕಾಕಡೆಯವರು ವಿದ್ಯಾರ್ಥಿಗಳು ಮತ್ತು ಹೆತ್ತವರ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮ ಸಂಘಟಿಸಲು ಸಹಕಾರ ನೀಡಿದ ವಿದ್ಯಾಂಗ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್ ಅವರು ಮಾತನಾಡಿದರು. ವಿದ್ಯಾಂಗ ಇಲಾಖೆಯ ನರಸಿಂಹ ಭಟ್ ಅವರು ಉಪಸ್ಥಿತರಿದ್ದರು.
ಮಧ್ಯಾಹ್ನ ಒಂದರಿಂದ ಎರಡು ಗಂಟೆಯವರೆಗೆ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು. ಒಂದರಿಂದ ನಾಲ್ಕನೇ ತರಗತಿಯವರೆಗೆ ಸಂಗೀತ ಮತ್ತು ಚಿತ್ರ ರಚನೆ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿತ್ತು. 5ರಿಂದ ಏಳನೇ ತರಗತಿಯವರೆಗೆ 8ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ಮತ್ತು ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರತ್ಯೇಕ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.