Sunday, December 25, 2011

' ಬರ ಪರಿಹಾರ ನಿರ್ವಹಣೆಯಲ್ಲಿ ಕರ್ನಾಟಕ ನಂ.1'

ಮಂಗಳೂರು,ಡಿಸೆಂಬರ್.25: ಬರ ಪರಿಹಾರ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ನಂ.1 ಸ್ಥಾನದಲ್ಲಿದೆ ಎಂಬುದನ್ನು ಕೇಂದ್ರವೇ ಮಾನ್ಯ ಮಾಡಿರುವುದಕ್ಕಾಗಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.ಅವರು ಸುರತ್ಕಲ್ ಎನ್ಐಟಿಕೆ ಹೆಲಿ ಪ್ಯಾಡ್ ನಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು. ಕೇಂ ದ್ರದ ವಿಜಯ್ ಕುಮಾರ್ ನೇತೃ ತ್ವದ ಸಮಿತಿ ದೇಶದ ಎಂಟು ರಾಜ್ಯ ಗಳಲ್ಲಿ ಸಮೀಕ್ಷೆ ನಡೆಸಿದ್ದು ಕರ್ನಾಟಕ ಬರ ಪರಿಹಾರ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದಾಗಿ ಘೋಷಿಸಿದೆ ಎಂದರು.ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ದೃಷ್ಟಿಯಿಂದ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.

ಮುಖ್ಯ ಮಂತ್ರಿ ಗಳನ್ನು ಉಸ್ತು ವಾರಿ ಸಚಿವ ಜೆ.ಕೃಷ್ಣ ಪಾಲೆ ಮಾರ್, ಸಚಿವ ರಾದ ಡಾ.ವಿ. ಎಸ್. ಆಚಾ ರ್ಯ,ಸಂ ಸದ ನಳಿನ್ ಕುಮಾರ್ ಕಟೀಲ್, ಕಮಿ ಷನರ್ ಸೀ ಮಂತ್ ಕುಮಾರ್ ಸಿಂಗ್, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ, ಮೀನು ಗಾರಿಕಾ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್, ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್ ಕೆ.ಟಿ. ಮತ್ತಿತರರು ಪುಷ್ಪ ಗುಚ್ಚವಿತ್ತು ಸ್ವಾಗತ ಕೋರಿದರು.