Thursday, December 29, 2011

ಯುವಜನೋತ್ಸವದ ಸಿದ್ದತೆ ಮುಖ್ಯಮಂತ್ರಿಗಳಿಂದ ಪರಿಶೀಲನೆ: ಯೋಗಿಶ್ ಭಟ್

ಮಂಗಳೂರು,ಡಿಸೆಂಬರ್.29 :ಪ್ರಥಮ ಬಾರಿಗೆ ಕರ್ನಾಟಕ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ನಡೆದಿರುವ ಸಿದ್ಧತೆಗಳ ಪರಿಶೀಲನೆಗೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಜನವರಿ 4 ಅಥವಾ 5 ರಂದು ಮಂಗಳೂರಿಗೆ ಆಗಮಿಸಿ ಖುದ್ದು ಪರಿಶೀಲನೆ ಮಾಡುವರೆಂದು ವಿಧಾನಸಭಾ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ತಿಳಿಸಿದ್ದಾರೆ.ಅವರು ಬುಧ ವಾರ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ನಡೆದ ರಾ ಷ್ಟ್ರೀಯ ಯುವ ಜನೋ ತ್ಸವ ತಯಾ ರಿಗಳ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡಿದರು.
ಯುವಜನೋತ್ಸವಕ್ಕೆ ಕರ್ನಾಟಕ ಸರ್ಕಾರ ರೂ.10 ಕೋಟಿ ನೀಡಿದೆ.ಕೇಂದ್ರ ಸರ್ಕಾರ 2 ಕೋಟಿ ನೀಡಿದೆ.ಇನ್ನು ಹೆಚ್ಚಿನ ಅನುದಾನಕ್ಕಾಗಿ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ ನೀಡಿದಲ್ಲಿ, ಮಾನ್ಯ ಮುಖ್ಯಮಂತ್ರಿಗಳಿಂದ ಮಂಜೂರಾತಿಗೆ ಕೋರಲಾಗುವುದೆಂದು ಅವರು ತಿಳಿಸಿದರು.