Thursday, December 8, 2011

ರಾಷ್ಟ್ರೀಯ ಯುವಜನೋತ್ಸವ ಸಿದ್ದತೆಗಳ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಂದ ಪ್ರಶಂಸೆ

ಮಂಗಳೂರು,ಡಿಸೆಂಬರ್.08:- ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012ರ ಜನವರಿ 12ರಿಂದ ಆರಂಭವಾಗುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಗಳು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟಿಲ್ ಅವರಿಂದ ಉದ್ಘಾಟನೆ ಆಗಲಿದ್ದು, ಇದರ ಪೂರ್ವಭಾವಿ ತಯಾರಿಗಳು ಹೇಗೆ ನಡೆದಿದೆ ಎಂಬ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ

ರಾಷ್ಟ್ರೀ ಯ ಯುವ ಜನೋ ತ್ಸವ ಉಸ್ತು ವಾರಿ ಹೊಣೆ ಹೊತ್ತಿ ರುವ ಜೈ ರಾಜ್ ಹಾಗೂ ವಾಣಿಜ್ಯ ಮತ್ತು ಕೈಗಾ ರಿಕಾ ಇಲಾಖೆ ಕಾರ್ಯ ದರ್ಶಿ ಗಳಾದ ಎಂ.ಮಹೇ ಶ್ವರ ರಾವ್ ಅವರು ಗಳು ಜಿಲ್ಲಾ ಧಿಕಾರಿ ಡಾ| ಎನ್. ಎಸ್.ಚ ನ್ನಪ್ಪ ಗೌಡ ಅವ ರೊಂದಿಗೆ ನಗ ರದ ಸರ್ಕಿಟ್ ಹೌಸ್ ನಲ್ಲಿ ವಿಚಾರ ವಿನಿ ಮಯ ಮಾಡಿ ದರು.
ನಂತರ ಅವರು ರಾಷ್ಟ್ರೀ ಯ ಯುವ ಜನೋ ತ್ಸವ ಮುಖ್ಯ ಕಾರ್ಯ ಕ್ರಮ ಜರು ಗುವ ಮಂಗಳಾ ಕ್ರೀಡಾಂ ಗಣಕ್ಕೆ ತೆರಳಿ ಅಲ್ಲಿ ನಡೆ ದಿರುವ ತಯಾರಿ ಗಳ ಬಗ್ಗೆ ಪರಿ ಶೀಲನೆ ನಡೆಸಿ ದರು. ಇಡೀ ಮಂಗಳಾ ಕ್ರೀ ಡಾಂಗ ಣಕ್ಕೆ ಧೂಳು ಏಳದಂತೆ ಕಾರ್ಪೆಟ್ ಹೊದಿಸಲು, ಕ್ರೀಡಾಂಗಣ ಸುತ್ತ ಅಲಂಕಾರ ಮಾಡಲು ಹೆಚ್ಚುವರಿ ಕಾರ್ಯದರ್ಶಿಯವರು ಸೂಚಿಸಿದರು.ಜನಪದ ನೃತ್ಯ, ಸಾಂಪ್ರದಾಯಿಕ ನೃತ್ಯಗಳು ನಡೆಯುವ ಟಿ.ಎಂ.ಎ ಪೈ ಕನ್ವ್ಷೆಷನ್ ಹಾಲ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸುವ ಸಾವಿರಾರು ಪ್ರತಿನಿಧಿಗಳಿಗೆ ವಾಸ್ತವ್ಯ ಹೂಡಲು ಮಾಡಿರುವ ವ್ಯವಸ್ಥೆಗಳನ್ನು ಹಾಗೂ ಸುರತ್ಕಲ್ ನಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ಅಲ್ಲಿಯ ವಿದ್ಯಾರ್ಥಿ ನಿಲಯ ಗಳಿಗೆ ಭೇಟಿ ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವ ಪುರಭವನಕ್ಕೂ ಸಹ ಭೇಟಿ ಇತ್ತು ಸ್ಥಳ ಪರಿಶೀಲಿಸಿ ಇಲ್ಲಿಯವರೆಗೂ ಆಗಿರುವ ತಯಾರಿಗಳ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವಾ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ ಸೇರಿದಂತೆ ಯುವಜನೋತ್ಸವದಲ್ಲಿ ವಿವಿಧ ಸಮಿತಿಗಳ ನೇತೃತ್ವ ವಹಿಸಿರುವ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.