Monday, December 26, 2011

ದಿ.ಸಂತೋಷ್ ಕುಮಾರ್ ಭಂಡಾರಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳಿಂದ ಸಾಂತ್ವನ

ಮಂಗಳೂರು,ಡಿಸೆಂಬರ್.26: ಬಂಟ್ವಾಳ ತಾಲೂಕು ರಾಯಿ ಗ್ರಾಮದ ಮಾಜಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿವಂಗತ ಸಂತೋಷ್ ಕುಮಾರ್ ಭಂಡಾರಿಯವರ ಅಕಾಲಿಕ ಮರಣದಿಂದ ಶೋಕ ತಪ್ತರಾದ ಅವರ ಕುಟುಂಬ ವರ್ಗ ದವ ರಿಗೆ ಸಾಂ ತ್ವನ ಹೇಳಲು ಮಾನ್ಯ ಮುಖ್ಯ ಮಂತ್ರಿ ಗಳಾದ ಡಿ.ವಿ. ಸದಾ ನಂದ ಗೌಡರು ಅವರ ಮನೆಗೆ ತೆರಳಿ ಸಂ ತಾಪ ಸೂಚಿ ಸಿದರು. ಕುಟುಂಬ ದವರಿಗೆ ದು:ಖ ಭರಿ ಸುವ ಶಕ್ತಿ ನೀಡ ಲೆಂದು ದೇವ ರಲ್ಲಿ ಪ್ರಾರ್ಥಿ ಸಿದರು.
ಮಾನ್ಯ ಮುಖ್ಯ ಮಂತ್ರಿ ಗಳ ಜೊತೆ ಯಲ್ಲಿ ಪರಿಸರ,ಒಳನಾಡು, ಜಲಸಾರಿಗೆ,ಬಂದರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ,ಸಂಸದರಾದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿರ ಜನಪ್ರತಿನಿಧಿಗಳು ಹಾಜರಿದ್ದರು.