Saturday, December 10, 2011

ಯುವಜನೋತ್ಸವ ಉದ್ಘಾಟನೆಗೆ ರಾಷ್ಟ್ರಪತಿಗಳು ; ಸಚಿವ ಪಾಲೆಮಾರ್

ಮಂಗಳೂರು,ಡಿಸೆಂಬರ್.10:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜನವರಿ 12 ರಿಂಧ 16 ರ ವರೆಗೆ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆಯುವ 17 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಅವರು ಆಗಮಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಹೇಳಿದರು.ಜಿಲ್ಲಾ ಧಿಕಾರಿ ಕಚೇರಿಯಲ್ಲಿ 17 ನೇ ರಾಷ್ಟ್ರೀಯ ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಸಭೆ ಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿ ಗೋಷ್ಟಿ ಯಲ್ಲಿ ಅವರು ವಿವರ ಗಳನ್ನು ನೀಡಿದರು.12 ರಂದು ಸಂಜೆ 5 ಗಂಟೆಗೆ ನಗರದ ಮಂಗಳ ಕ್ರೀಡಾಂಗಣದಲ್ಲಿ ಮೇಳ ರಾಷ್ಟ್ರಪತಿಯವರಿಂದ ಉದ್ಘಾಟನೆಗೊಳ್ಳಲಿದ್ದು,ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ,ಗೌರವ್ವನಿತ ರಾಜ್ಯಪಾಲರಾದ ಹಂಸರಾಜ ಭಾರದ್ವಾಜ್,ಕೇಂದ್ರ ಹಾಗೂ ರಾಜ್ಯದ ಅನೇಕ ಮಂತ್ರಿಗಳು ಮತ್ತು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ವಿವಿಧ ರಾಜ್ಯ ಹಾಗೂ ಕೇಂದ್ರ ಡಳಿತ ಪ್ರದೇಶ ಗಳಿಂದ ಸುಮಾರು ಆರು ಸಾವಿರ ಯುವ ಜನರು ಈ ಮೇಳ ದಲ್ಲಿ ಭಾಗ ವಹಿಸ ಲಿದ್ದಾರೆ, ಅಲ್ಲದೆ ಸಾರ್ಕ್ ರಾಷ್ಟ್ರ ಗಳಿಂದಲೂ ಅನೇಕರು ಪಾಲ್ಗೊ ಳ್ಳುವ ಹಿನ್ನೆಲೆ ಯಲ್ಲಿ ವಿಶೇಷ ಮುತು ವರ್ಜಿ ವಹಿಸಿ ಮೇಳ ಯಶಸ್ವಿ ಯಾಗಲು ಈಗಾಗಲೇ 15 ಸಮಿತಿಗಳನ್ನು ರಚಿಸಿ ಅವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ನಗರದ ದೇವಾಲಯ, ಚರ್ಚು, ಮಸೀದಿ, ಪ್ರಮುಖ ರಸ್ತೆ,ಬೀದಿಗಳನ್ನು ಶೃಂಗರಿಸಲಾಗುವುದು ಮತ್ತು 5 ದಿನಗಳ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಉಟೋಪಚಾರ, ವಾಸ್ತವ್ಯ, ಭದ್ರತೆ ಸೇರಿದಂತೆ ಯಾವುದೇ ಲೋಪಗಳಾಗದಂತೆ ಅಧಿಕಾರಿಗಳೊಂದಿಗೆ ಅನೇಕ ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದರು.ಯುವ ಜನೋ ತ್ಸವದ ಸಲು ವಾಗಿ ಜೆಪ್ಪು ನೇತ್ರಾ ವತಿ ನದಿ ಯಲ್ಲಿ 2 ಹೌಸ್ ಬೋಟ್ ಸೇರಿ ದಂತೆ ಇತರ ಬೋಟಿಂಗ್ ಸೌಲಭ್ಯ ಕಲ್ಪಿಸ ಲಾಗುವುದು.ಇದಲ್ಲದೇ ಪಣಂ ಬೂರು ಕಡಲ ಕಿನಾರೆ ಯಲ್ಲಿ ಬೀಚ್ ವಾಲಿ ಬಾಲ್, ಪಿಲಿ ಕುಳದಲ್ಲಿ ಕಂಬಳ ಹೀಗೆ ಹತ್ತು ಹಲವು ಮನೋ ರಂಜನಾ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಚಿವರು ಮಾತಿತಿ ನೀಡಿದರು. ಉಪಸಭಾಪತಿ ಎನ್.ಯೋಗಿಶ್ ಭಟ್, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ,ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಪ್ರಕಾಶ್ , ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್,ಜಿಲ್ಲಾ ಯುವಜನ ಸೇವಾ ಕ್ರೀಡಾಧಿಕಾರಿ ಪಾಶ್ವನಾಥ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.