Sunday, December 11, 2011

ಗಂಜಿಮಠ-ಮುಚ್ಚೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಂಗಳೂರು,ಡಿಸೆಂಬರ್.11:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ,ಮಂಗಳೂರು ತಾಲೂಕು ಪಂಚಾಯತ್ ಮತ್ತು ಗಂಜಿಮಠ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಅಭೀವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವರಿ ಸಚಿವರಾರ ಕೃಷ್ಣ ಜೆ ಪಾಲೆಮಾರ್ ಅವರು ಶನಿವಾರ ಚಾಲನೆ ನೀಡಿದರು. ಮುಖ್ಯ ಮಂತ್ರಿ ಗಳ ಸಡಕ್ ಯೋಜನೆ ಯಲ್ಲಿ 6.37 ಕಿ.ಮೀ ಉದ್ದದ 2.05 ಕೋಟಿ ರೂಪಾಯಿ ಗಳ ವೆಚ್ಚದಲ್ಲಿ ನಿರ್ಮಿ ಸಲಾ ಗುವ ನಾರ್ಲ ಪದವು ಮಳಲಿ ಕಾಜಿಲ ರಸ್ತೆಯ ಕಾಮ ಗಾರಿಗೆ ಶಿಲಾನ್ಯಾಸ,ಸುವರ್ಣ ಗ್ರಾಮ ಸಡಕ್ ಯೋಜನೆ ಯಡಿ ಯಲ್ಲಿ 1.25 ಕೋ. ವೆಚ್ಚದ 19 ರಸ್ತೆ,5 ಚ ರಂಡಿ,2 ಸಮು ದಾಯ ಭವನ,3 ಅಂಗನ ವಾಡಿ ಸೇರಿ ದಂತೆ 32 ವಿವಿಧ ಕಾಮ ಗಾರಿ ಗಳನ್ನು ಸಚಿವರು ಉದ್ಘಾ ಟಿಸಿ ದರು.ಇದೇ ಸಂದ ರ್ಭದಲ್ಲಿ ಮುಚ್ಚೂರು ಪ್ರೌಢ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನರ ವೇರಿ ಸಿದರು.ಗಂಜಿ ಮಠ ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮಗಲಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ತಾಲೂಕ್ ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ,ತಾಲೂಕ್ ಪಂಚಾಯತ್ ಉಪಾಧ್ಯಕ್ಷೆ ವಿಜಯ ಲಕ್ಷ್ಮೀ,ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವಾ,ಗ್ರಾಮ ಪಂಚಾಯ್ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಜಯಾನಂದ ನಾಯ್ಕ್,ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಉಪಸ್ಥಿತರಿದ್ದರು.ಮುಚ್ಚೂರು ಪ್ರೌಢ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನ ಕಾರ್ಯಕ್ರಮದಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ,ಸಾರ್ವಜನಿಕ ಶಿಕ್ಷಣಾ ಇಲಾಕೆಯ ಉಪ ನಿರ್ದೇಶಕ ಮೋಸೆಸ್ ಜಯಶೇಖರ್,ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವಾ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.