Monday, September 24, 2012

ತಾಂತ್ರಿಕ ನೈಪುಣ್ಯತೆ ಸಾಧಿಸಿ:ವಿದ್ಯಾರ್ಥಿನಿಯರಿಗೆ ಸಚಿವ ರವಿ ಕರೆ

ಮಂಗಳೂರು,ಸೆಪ್ಟೆಂಬರ್.24: ಎಲ್ಲ ಕ್ಷೇತ್ರದಲ್ಲೂ ನಮ್ಮ ಪೂರ್ವಜರು ಪರಿಣತರಾಗಿದ್ದರು. ಲೋಹಶಾಸ್ತ್ರ, ಭೂಗೋಳ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಾವೀಣ್ಯತೆಯನ್ನು ಪಡೆದ ನಮ್ಮ ಪೂರ್ವೀಕರೇ ನಮಗೆ ಇಂದು ಮಾದರಿಯಾಗಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಹೇಳಿದರು.
ಅವ ರಿಂದು ನಗ ರದ ಬೋಂ ದೆಲ್ ಮಹಿಳಾ ಐಟಿಐ ಕಾಲೇ ಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾ ಟನೆ ಮತ್ತು ಕ್ರೀಡಾ ಸಂಘ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.
ಅತ್ಯಂತ ಪ್ರಾಚೀನ ನಾಗರೀ ಕತೆ ಭಾರತದ ಹರಪ್ಪ ಮೊಹೆಂ ಜಾದಾ ರೋದ ನಗರ ಯೋಜ ನೆಗಳು, ಹಂಪಿಯ ಕುಡಿ ಯುವ ನೀರಿನ ಯೋಜನೆ ಗಳು, ನಮ್ಮ ಭವ್ಯ ದೇವಾ ಲಯ ಗಳ ನಿರ್ಮಾ ಣಗಳು ಪೂರ್ವಿ ಕರ ಇಂಜಿನಿ ಯರಿಂಗ್ ಪ್ರಾವೀ ಣ್ಯತೆಗೆ ಸಾಕ್ಷಿ ಗಳಾಗಿ ನಿಂತಿವೆ.
ನಾವಿಂದು ತಾಂತ್ರಿಕ ಕ್ಷೇತ್ರದಲ್ಲೇ ಅಷ್ಟೇ ನೈಪು ಣ್ಯತೆಯನ್ನು ಸಾಧಿಸಿ ಪ್ರಪಂಚ ದಲ್ಲಿ ನಂಬರ್ ವನ್ ಪಟ್ಟಕ್ಕ್ಕೆ ತಲುಪ ಬೇಕಾ ಗಿದೆ.ಸೇವಾ ಕ್ಷೇತ್ರದಲ್ಲಿ ನಾವಿಂದು ನಂಬರ್ ವನ್ ಸ್ಥಾನ ದಲ್ಲಿ ದ್ದೇವೆ. ವಿದ್ಯಾ ರ್ಥಿಗಳು ತಾಂತ್ರಿಕ ಶಿಕ್ಷಣ ವನ್ನು ಪಡೆದು ಉನ್ನತ ಸ್ಥಾನಕ್ಕೆ ದೇಶವನ್ನು ಏರಿಸುವ ಹೊಣೆ ಹೊರಬೇಕಿದೆ ಎಂದರು. ಕ್ಷಿಪಣಿ ತಂತ್ರಜ್ಞಾನ, ಸಂಶೋಧನೆ, ಭೂಗೋಳದಲ್ಲಿ ಚರಿತ್ರೆ ನಿರ್ಮಿಸಿದವರು ನಾವು.ಪ್ರಸಕ್ತ ಸಂದರ್ಭದಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕಿದೆಎಂದು ಸಲಹೆ ಮಾಡಿದರು.ವಿಧಾನ ಪರಿಷತ್ ಸದಸ್ಯ ಮೋನಪ್ಪಭಂಡಾರಿ ಸಭೆಯಲ್ಲಿದ್ದರು.