Monday, September 24, 2012

ಮಾರ್ಗಸೂಚಿ ಅನುಸರಿಸಿ ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು,ಸೆಪ್ಟೆಂಬರ್. 24: ನಗರೋತ್ಥಾನ ಯೋಜನೆಯ ಎರಡನೇ ಹಂತದಲ್ಲಿ ದಕ್ಷಿಣಕನ್ನಡ ಜಿಲ್ಲೆಗೆ 32 ಕೋಟಿ ರೂ.ಗಳ ಅನುದಾನ ಲಭಿಸಿದ್ದು,ಕ್ರಿಯಾ ಯೋಜನೆ ಸಿದ್ಧಗೊಂಡಿದೆ, ಕಾಲಮಿತಿಯೊಳಗೆ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಸೂಚಿಸಿದರು.
ಇಂದು ಜಿಲ್ಲಾ ಧಿಕಾ ರಿಗಳ ಕಚೇ ರಿಯಲ್ಲಿ ನಗ ರೋತ್ಥಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಅವರು, ಅಂದಾಜು ಪಟ್ಟಿ ಸಲ್ಲಿಕೆ ಮತ್ತು ಟೆಂಡರ್ ಆಹ್ವಾ ನಿಸಲು ಒಂದು ತಿಂಗಳು ಕಾಲಾ ವಕಾಶ ವಿದ್ದು, ಯಾವುದೇ ಕ್ರಿಯಾ ಯೋಜನೆ ಗಳು ತಕ ರಾರು ಆಗ ದಂತೆ ಸಲ್ಲಿ ಸಲು ಸಚಿವರು ಮಾರ್ಗ ದರ್ಶನ ನೀಡಿದರು. ರಸ್ತೆ ವಲಯಕ್ಕೆ ಶೇ.80ರಷ್ಟು ಅನುದಾನ ಮತ್ತು ನಗರ ಚರಂಡಿಗಳ ಅಭಿವೃದ್ಧಿಗೆ ಶೇ 20ರಷ್ಟು ಅನುದಾನವನ್ನು ಕಾಯ್ದಿರಿಸಿದ್ದು, ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತನ್ನಿ ಎಂದರು ಎಲ್ಲ ಕಾಮಗಾರಿಗಳನ್ನು ಅಭಿವೃದ್ಧಿ ಕಾಮಗಾರಿ ಎಂದು ಸೂಚಿಸದೆ ಕಾಂಕ್ರೀಟ್ರಸ್ತೆ, ಡಾಮರೀಕರಣ ರಸ್ತೆ, ಚರಂಡಿ ಕಾಮಗಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ ಎಂದು ಸೂಚಿಸಿದರು. ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ 11 ರಲ್ಲಿ ನೀರು ಸರಬರಾಜು ಮತ್ತು ಯುಜಿಡಿಗೆ ಸಂಬಂಧಿಸಿದಂತೆ ಬೃಹತ್ ಮೂಲ ಸೌಲಭ್ಯ ಯೋಜನೆಗಳನ್ನು ರೂಪಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ಪಟ್ಟಣ ಗಳ ಅಭಿ ವೃದ್ಧಿಗೆ ಹಲವು ಹಂತದ ಸಮಿತಿ ಗಳನ್ನು ರಚಿಸ ಲಾಗಿದ್ದು, ಕಾಮ ಗಾರಿ ಕಾಲ ಮಿತಿ ಯೊಳಗೆ ಅನು ಷ್ಠಾನಕ್ಕೆ ಬರಲು ಸ್ಪಷ್ಠೀ ಕರಣಕ್ಕೆ ಕೇಳಿ ಪ್ರಸ್ತಾ ವನೆಗಳು ಹಿಂದಿ ರುಗ ದಂತೆ ಅಂದಾಜು ಪಟ್ಟಿ ಸಲ್ಲಿಕೆ ಯಾಗ ಬೇಕಿದೆ ಎಂದರು. ಬಂಟ್ವಾಳ, ಮೂಡಬಿದರೆ, ಪುತ್ತೂರು, ಉಳ್ಳಾಲ ಪುರಸಭೆ ಮತ್ತು ಬೆಳ್ತಂಗಡಿ, ಸುಳ್ಯ, ತಾಲೂಕುಕೇಂದ್ರ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ ಗಳಿಗೆ ಒಟ್ಟು 32 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಪ್ರತೀ ಪಟ್ಟಣಕ್ಕೆ ರೂ.5 ಕೋಟಿಗಳಂತೆ ಅನುದಾನ ನೀಡಲಾಗಿದೆ. ಅಭಿವೃದ್ಧಿಯನ್ನು ಸಮಗ್ರವಾಗಿ ರೂಪಿಸಲು ಎಸ್ಎಫ್ ಸಿ ಅಥವಾ ಇತರೆ ಅನುದಾನದ ಸದ್ಬಳಕೆ ಮಾಡಬಹುದು ಎಂದ ಸಚಿವರು, ಜಿಲ್ಲಾವಾರು ಟೆಂಡರ್ ಪ್ಯಾಕೇಜ್ ಕರೆಯುವ ಬಗ್ಗೆ ಸಚಿವ ಬಾಲಕಿಚಂದ್ರ ಜಾರಕಿಹೊಳೆ ಜೊತೆ ಚರ್ಚಿಸಿ ಪರಿಹಾರ ನೀಡುವುದಾಗಿ ಸೂಚಿಸಿದರು. ಬಂಟ್ವಾಳ ಪುರಸಭೆಗೆಒಟ್ಟು 7 ರಸ್ತೆ ಕಾಮಗಾರಿಗಳು ಹಾಗೂ ಎರಡು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 6 ಕಾಮಗಾರಿಗಳಿಗೆ 5 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ ಎರಡು ಕಾಂಕ್ರಿಟ್ ರಸ್ತೆ ಸೇರಿದಂತೆ ಒಟ್ಟು 6 ರಸ್ತೆಗಳನ್ನು ಗುರುತಿಸಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಮುಲ್ಕಿ ನಗರ ಪಂಚಾಯತ್ ಗೆ 2ಕೋಟಿ ರೂ.ವೆಚ್ಚದಲ್ಲಿ ಮೂರು ರಸ್ತೆ ಕಾಮಗಾರಿ, ಒಂದು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ 5 ಕೋಟಿರೂ.ವೆಚ್ಚದಲ್ಲಿ 4 ರಸ್ತೆ ಕಾಮಗಾರಿ, ಎರಡು ಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 6 ರಸ್ತೆ ಕಾಮಗಾರಿ, ಎರಡು ಚರಂಡಿ ಕಾಮಗಾರಿಗಳ ಅಂದಾಜುಪಟ್ಟಿ ತಯಾರಿಸಲಾಗಿದೆ.ಉಳ್ಳಾಲ ವ್ಯಾಪ್ತಿಯಲ್ಲಿ 8 ರಸ್ತೆಗಳ ಕಾಮಗಾರಿ, ಎರಡುಚರಂಡಿ ಕಾಮಗಾರಿಗಳ ಅಂದಾಜು ಪಟ್ಟಿತಯಾರಿಸಲಾಗಿದೆ.ಕಳೆದ ಸಾಲಿನಲ್ಲಿ ಬಾಕಿ ಉಳಿದ ಕಾಮಗಾರಿ ಮತ್ತು ಪ್ರಸಕ್ತ ಸಾಲಿನಲ್ಲಿ ಸಾಧಿಸಬೇಕಾದ ಗುರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಮಂಜೂರಾದ ಎರಡು ಕೋಟಿ ರೂ.ಗಳಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ಪಾಲಿಕೆ ಆಯುಕ್ತರು ಸಚಿವರಿಗೆ ನೀಡಿದರು.ಎರಡನೇ ಹಂತದ ಒಂದು ಕೋಟಿ ರೂ.ಗಳಲ್ಲಿ ಹಲವು ಕಾಮಗಾರಿಗಳು ಮುಗಿದಿದ್ದು, ಹಣ ಬಿಡುಗಡೆಯಾಗಬೇಕಿದೆ ಎಂದರು.ಬಿಡುಗಡೆಯಾಗ ಬೇಕಾದ ಅನುದಾನದ ಬಗ್ಗೆ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಸಂಜೆಯೊಳಗೆ ಮಾಹಿತಿ ನೀಡಿದರೆ ಅನುದಾನ ಬಿಡುಗಡೆ ಕುರಿತು ಸಕರ್ಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದರು. ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕರಾದ ಅಂಗಾರ, ಮೂಡಬಿದ್ರೆ ಶಾಸಕರಾದ ಅಭಯಚಂದ್ರಜೈನ್, ಮಂಗಳೂರು ಶಾಸಕ ಯು ಟಿ ಖಾದರ್,ಬಂಟ್ವಾಳ ಶಾಸಕ ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಭಾನು, ಜಿಲ್ಲಾಧಿಕಾರಿ ಡಾಎನ್ಎಸ ಚನ್ನಪ್ಪಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಮನಾಪ ಆಯುಕ್ತರಾದ ಡಾ ಹರೀಶ್ ಕುಮಾರ್, ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ತಾಕತ್ ರಾವ್ ಅವರನ್ನೊಳಗೊಂಡಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.