Thursday, September 27, 2012

ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಗೆ ಆದ್ಯತೆ: ಇಂಧನ ಸಚಿವರು

ಮಂಗಳೂರು, ಸೆಪ್ಟೆಂಬರ್ .27: ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯನ್ನು ರಾಜ್ಯ ನಿರೀಕ್ಷಿಸುತ್ತಿದ್ದು, ಬೇಡಿಕೆಯನ್ನು ಈಡೇರಿಸಲು ಇಲಾಖೆ ಶಕ್ತಿಮೀರಿ ಶ್ರಮಿಸುತ್ತಿದೆ. ಉತ್ಪಾದನೆ ಮತ್ತು ವಿತರಣೆಯಲ್ಲಿ ಲೋಪವಾಗದಿರಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ ಎಂದು ಇಂಧನ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರುಹೇಳಿದರು.
ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂ ರಿನಲ್ಲಿ ಗುಣ ಮಟ್ಟದ ವಿದ್ಯುತ್ ಸರಬ ರಾಜಿಗಾಗಿ 33/11 ಕೆವಿ ವಿದ್ಯುತ್ ಉಪ ಕೇಂದ್ರ ಹಾಗೂ ಪುತ್ತೂರು ಗ್ರಾಮಾಂತರ ಉಪ ವಿಭಾಗದ ಉದ್ಘಾಟನಾ ಸಮಾ ರಂಭದಲ್ಲಿ ಉದ್ಘಾ ಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಇಂಧನ ಸಚಿವೆಯಾಗಿ ತವರು ಕ್ಷೇತ್ರವನ್ನು ಬೆಳಗಿ ಸಬೇಕೆಂಬ ಇಚ್ಛೆ ಕಾರ್ಯ ರೂಪಕ್ಕೆ ಬಂದಿದೆ. ವೋಲ್ಟೇಜ್ ಸಮಸ್ಯೆ, ಲೈನ್ ಕೊರತೆ ನೀಗಿಸಲು ಕ್ರಮ. 11 ತಿಂಗ ಳ ಕಾಲ ಮಿತಿಯೊಳಗೆ ಸವಣೂ ರಿನಲ್ಲಿ ಯೋಜನೆ ಅನುಷ್ಠಾನ ಗೊಂಡಿದ್ದಕ್ಕೆ ಮೆಸ್ಕಾಂನ್ನು ಅಭಿ ನಂದಿಸಿದರು. ಹಳ್ಳಿಯ ರೈತರ ಆಗ್ರಹ ರಸ್ತೆ, ವಿದ್ಯುತ್, ಅಡಿಕೆ ಬೆಳೆಗೆ ಬೆಲೆ; ಇದೇ ಇಲ್ಲಿನ ಪ್ರಮುಖ ಬೇಡಿಕೆ. ಬರದಿಂದಾಗಿ ರಾಜ್ಯದ ಪ್ರಮುಖ ಅಣೆಕಟ್ಟುಗಳು ಭತರ್ಿಯಾಗದೆ ವಿದ್ಯುತ್ ಕ್ಷಾಮ ನಿರೀಕ್ಷೆಗಿಂತ ಮುಂಚೆ ನಮ್ಮ ಮುಂದಿದೆ.
2,100 ಮೆಗಾವ್ಯಾಟ್ ಪವನವಿದ್ಯುತ್ ಈ ಸಮಯದಲ್ಲಿ ಹಲವೆಡೆಗಳಲ್ಲಿ ಉತ್ಪಾದಿಸಲಾಗುತ್ತಿದ್ದು, ಇಂದು ಪವನಶಕ್ತಿಯಿಂದ ಉತ್ಪಾದನೆಯಾಗುತ್ತಿದ್ದ ವಿದ್ಯುತ್ನ ಪ್ರಮಾಣವು 60ರಿಂದ 70ಕ್ಕೆ ಇಳಿದಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಉಡುಪಿಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಪರಿಸ್ಥಿತಿ ಜಿಲ್ಲೆಯಲ್ಲಿ ಸಮಾಧಾನಕರ ಎಂದರು.
ಗ್ರಾಹ ಕರಿಗೆ ಗುಣ ಮಟ್ಟದ ವಿದ್ಯುತ್ ಸರಬ ರಾಜು ಮಾಡಲು ಕಂಪೆ ನಿಯು ಹಲವಾರು ಸುಧಾ ರಣಾ ಕ್ರಮ ಗಳನ್ನು ಕೈ ಗೊಂಡಿದ್ದು, ಸವ ಣೂರು ಮತ್ತು ಸುತ್ತ ಮುತ್ತಲಿನ ಪ್ರದೇಶ ದಲ್ಲಿ ಇನ್ನಷ್ಟು ಗುಣ ಮಟ್ಟದ ವಿದ್ಯುತ್ ಸರ ಬರಾಜು ಮಾಡುವ ಸಲುವಾಗಿ ಹಾಲಿ ಕುಂಬ್ರ 33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಮೇಲಿನ ಹೊರೆಯನ್ನು ಬೇರ್ಪಡಿಸಿ ಸವಣೂರು 33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಸ್ಥಾಪನೆಗೊಂಡು ಲೋಕಾರ್ಪಣೆಗೊಂಡಿದೆ. ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆಯನ್ನು ಒದಗಿಸಲು ಗ್ರಾಮಾಂತರ ಉಪವಿಭಾಗವನ್ನು ಚಾಲನೆಗೊಳಿಸಲಾಗುತ್ತಿದೆ.
ಉದ್ಯಮಗಳು, ಪಂಪ್ ಸೆಟ್ ಮನೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬೇಡಿಕೆ ಜಾಸ್ತಿಯಾಗುತ್ತಿದೆ. ಹಲವು ಪಯರ್ಾಯಗಳನ್ನು ಸಕರ್ಾರ ಕೈಗೊಂಡಿದೆ. ಉತ್ಪಾದನೆ, ಸಾಗಾಣಿಕೆ, ವಿತರಣೆ ನಿರ್ವಹಿಸಲು ಕ್ರಮ. ವಿದ್ಯುತ್ ವ್ಯತ್ಯಯ ಉಳಿಸಲು ಈ ಘಟಕವಿದ್ದು, ಜಿಲ್ಲೆಯ ಎಲ್ಲರ ಸಹಕಾರದಿಂದ ಮೆಸ್ಕಾಂ ನಷ್ಟವಿಲ್ಲದೆ ಸಾಗುತ್ತಿದೆ. ಪವರ್ ಆಡಿಟಿಂಗ್ ಇಂದಿನವರೆಗೆ ಆಗಿಲ್ಲ. ತಮ್ಮ ಅಧಿಕಾರವಧಿಯಲ್ಲಿ ಸ್ಟೇಷನ್ ಮತ್ತು ಲೈನ್ ಗೆ ಕೆಪಿಟಿಸಿ ಎಲ್ ನಿಂದ 10.50 ಕೋಟಿ ಖರ್ಚಾಗಿದೆ. ಸುಳ್ಯದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸುವುದು ಇಲ್ಲಿನ ಆದ್ಯತೆಯಾಗಿದ್ದು, ಗುರಿ ಸಾಧಿಸುವ ನಿರೀಕ್ಷೆ ಇದೆ.
ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆಯಡಿ ಜಿಲ್ಲೆಗೆ 70.88 ಕೋಟಿ ರೂ.ಗಳ ಅನುದಾನ ಬಂದಿದ್ದು, ಹೊಸ ಯೋಜನೆಗಳಡಿ ಸಮಗ್ರ ಅಭಿವೃದ್ದಿಗೆ ಕ್ರಮ. ವಿನೂತನ ತಂತ್ರಜ್ಞಾನದ ಮೂಲಕ ಇಲಾಖೆಯ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಂತಿಮೊಗರು ಸೇತುವೆ ಮಂಜೂರು ಮಾಡಿದೆ ಎಂದರು.
ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಸೂಕ್ತ ಸ್ಪಂದನೆ. ಸಮೀಕ್ಷೆ, ಕ್ಯಾಂಪ್ ಮೂಲಕ ಪರಿಹಾರ, ಗೌರವಧನ ನೀಡಲು ಯತ್ನಿಸಿದ್ದೇವೆ. ಇನ್ನೂ ಹಲವು ಗ್ರಾಮಗಳಲ್ಲಿ ಈ ಕೆಲಸ ಆಗಬೇಕಿದೆ. ಅದನ್ನು ಸರ್ಕಾರ ನೆರವೇರಿಸಲಿದೆ.
ಅಧ್ಯಕ್ಷೀಯ ಭಾಷಣ ದಲ್ಲಿ ಶಾಸಕ ಶ್ರೀ ಎಸ್ ಅಂಗಾರ ಅವರು ಮಾತ ನಾಡಿ, ಇಂಧನ ಸಚಿ ವರ ಕಾರ್ಯ ಕ್ಷಮತೆ ಯನ್ನು ಪ್ರಶಂ ಸಿಸಿದರು.
ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಶ್ರೀಮತಿ ಕೆ ಟಿ ಶೈಲಜಾ ಭಟ್, ತಾಲೂಕು ಪಂಚಾಯ ತ್ ಅಧ್ಯಕ್ಷ ಡಿ ಶಂಭು ಭಟ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಸಾವಿತ್ರಿ ಎಚ್ ಎಸ್, ತಾಲೂಕು ಪಂಚಾಯ ತ್ ಉಪಾಧ್ಯಕ್ಷರಾದ ಶ್ರೀಮತಿ ಪುಲಸ್ಯ ರೈ, ಸವಣೂರು ತಾಲೂಕು ಪಂಚಾಯ ತ ಸದಸ್ಯರಾದ ದಿನೇಶ್ ಮೆದು, ಸವಣೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಧಾ ಎಸ್ ರೈ, ಸವಣೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ರಾಕೇಶ್ ರೈ, ಕವಿಪ್ರನಿನಿ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಸೆಲ್ವ ಕುಮಾರ್ ಉಪಸ್ಥಿತರಿದ್ದರು. ಮೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ನರಸಿಂಹ ಸ್ವಾಗತಿಸಿದರು.