Saturday, September 22, 2012

ಆತ್ಮವಿಶ್ವಾಸದಿಂದ ಗುರಿ ಸಾಧನೆ: ಎಸಿಪಿ ಕವಿತ


 ಮಂಗಳೂರು, ಸೆಪ್ಟೆಂಬರ್. 22 : ಬದುಕು ಕಟ್ಟಲು ಆತ್ಮವಿಶ್ವಾಸ ಮುಖ್ಯ; ಚೆನ್ನಾಗಿ ಬದುಕಬೇಕು ಎಂಬ ಶ್ರದ್ಧೆ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಲು ಕಲಿಸುತ್ತದೆ ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಕವಿತ ಬಿ ಟಿ ಹೇಳಿದರು.
           ಅವರು ಶುಕ್ರ ವಾರ ದಂದು  ವಾರ್ತಾ ಇಲಾಖೆ, ಪೊಲೀಸ್ ಕಮಿ ಷನ ರೇಟ್ ಮತ್ತು ಗೋವಿಂದ ದಾಸ ಕಾಲೇಜು ಸುರ ತ್ಕಲ್  ಸಂಯು ಕ್ತಾಶ್ರ ಯದಲ್ಲಿ ಕಾಲೇ ಜಿನ ಸಭಾಂ ಗಣದಲ್ಲಿ ಆಯೋ ಜಿಸಲಾದ 'ಸ್ಪರ್ಧಾತ್ಮಕ ಪರೀಕ್ಷೆ ಗಳು ಮತ್ತು ಆತ್ಮ ವಿಶ್ವಾಸ' ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಬಾಲ್ಯದಿಂದಲೇ ನಮ್ಮ ವ್ಯಕ್ತಿತ್ವ ಅರಳಲಾರಂಭಿಸುತ್ತದೆ. ಪದವಿ ತರಗತಿಗಳಿಗೆ ತಲುಪುವಾಗ ವಿದ್ಯಾರ್ಥಿಗಳು ಯುಪಿಎಸ್ಸಿ, ಕೆಪಿಎಸ್ ಸಿ ಪರೀಕ್ಷೆಗಳನ್ನು ಬರೆಯಲು ಆರಂಭಿಸಬೇಕು. ಎಲ್ಲವೂ, ಎಲ್ಲರಿಗೂ ಪ್ರಥಮ ಪ್ರಯತ್ನದಲ್ಲೇ ಸಾಧ್ಯವಾಗುವುದಿಲ್ಲ. ಇಂದು ಈ ಪರೀಕ್ಷೆಗಳನ್ನು ಎದುರಿಸಲು ಪೂರಕವಾಗಿ ಹಲವು ತರಬೇತಿ ಕಾರ್ಯಕ್ರಮಗಳಿವೆ, ಅಂತಿಮವಾಗಿ ಸ್ಪರ್ಧೆಯಲ್ಲೇ ಜಯಿಸಲು ನಮ್ಮ ಪ್ರಯತ್ನ ಅಗತ್ಯ. ಪರೀಕ್ಷೆಯನ್ನು ಎಷ್ಟು ಬಾರಿ ಬರೆಯಬಹುದು. ಹೇಗೆ ಬರೆಯಬಹುದು. ಕೇವಲ ಓದುವಿಕೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಜಗತ್ತಿನ ಪ್ರಸಕ್ತ ವಿದ್ಯಮಾನಗಳನ್ನು ತಿಳಿಯುವ ಆಸಕ್ತಿ ವಿದ್ಯಾರ್ಥಿ ಗಳಿಗಿ ರಬೇ ಕೆಂದು ಕವಿತ ನುಡಿ ದರು.
ಇಂದು ವಿದ್ಯಾ ರ್ಥಿಗ ಳಿಗೆ ವಿಫುಲ ಅವ ಕಾಶ ವಿದ್ದು, ಶ್ರದ್ಧೆ ಮತ್ತು ಪೂರ್ವ ಸಿದ್ಧತೆ, ಶ್ರಮ ನಮ್ಮನ್ನು ಸಾಧ ನೆಯ ಉತ್ತುಂ ಗಕ್ಕೆ ತಲು ಪಲು ನೆರ ವಾಗು ವುದು ಎಂದರು.
ಸಂವಾದ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದ ಕಾಲೇ ಜಿನ ಉಪ ಪ್ರಾಂಶು ಪಾಲರಾದ ಪ್ರೊ. ಟಿ ಎಸ್. ಶ್ರೀಪೂರ್ಣ ಅವರು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿದರೆ ತರಬೇತಿ ನೀಡಲಾಗುವುದು ಎಂದು ಘೋಷಿಸಿದರಲ್ಲದೆ, ವಿದ್ಯಾರ್ಥಿಗಳು ತಾವು ಯಾವ ರೀತಿಯಲ್ಲೂ ಇತರರಿಗಿಂತ ಕೀಳಲ್ಲ. ಶ್ರಮ ವಹಿಸಿ ಕಲಿತು ಅಧಿಕಾರ ದೊರೆತಾಗ, ಅಧಿಕಾರವನ್ನು ಜನಪರವಾಗಿ ಬಳಸಿಕೊಳ್ಳುವುದನ್ನು ಮರೆಯಬಾರದು. ಕಾಲೇಜಿನ ಹಲವು ವಿದ್ಯಾರ್ಥಿಗಳಿಂದು ಉತ್ತಮ ಸ್ಥಾನದಲ್ಲಿದ್ದಾರೆ. ಇಂದಿನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರೇರಪಣೆಯಾಗಲಿ ಎಂದರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ ಕಾರ್ಯಕ್ರಮದ ಉದ್ದೇಶ ವಿವರಿಸಿ ಸ್ವಾಗತಿಸಿದರು.