Saturday, September 22, 2012

ವೈದ್ಯರ ಮನೋವೃತ್ತಿ ಬದಲಾಗಬೇಕು:ಡಾ.ಎನ್. ವಿನಯ ಹೆಗ್ಡೆ

ಮಂಗಳೂರು, ಸೆಪ್ಟೆಂಬರ್.22: ಎಲ್ಲ ಮುಂಚೂಣಿ ದೇಶಗಳಲ್ಲಿರುವ ವೈದ್ಯಕೀಯ ಸೇವೆಗಳು ದಕ್ಷಿಣ ಕನ್ನಡದಲ್ಲಿ ಇಂದು ಲಭ್ಯ. ಸೇವೆ ನೀಡುವ ವೈದ್ಯರ ಮನೋಭಾವ, ವೈದ್ಯರ ಸಹಕಾರ, ಗ್ರಾಮೀಣ ಪ್ರದೇಶಗಳಲ್ಲಿ ಅತೀ ಅಗತ್ಯ ವಾಗಿದೆ ಎಂದು ನಿಟ್ಟೆ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಡಾ. ಎನ್. ವಿನಯ್ ಹೆಗ್ಡೆ ಹೇಳಿದರು.
              ಇಂದು ಜಿಲ್ಲಾ ಪಂಚಾ ಯತ್  ನೇತ್ರಾ ವತಿ ಸಭಾಂಗ ಣದಲ್ಲಿ ಜಿಲ್ಲಾ ಪಂಚಾ ಯತ್  ವತಿ ಯಿಂದ ಆಯೋ ಜಿಸಲಾದ 'ಆರೋಗ್ಯದೆಡೆಗೆ ನಮ್ಮ ನಡಿಗೆ'  ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತಿದ್ದರು.
ಇಂದು ವೈದ್ಯಕೀಯ ಸೇವೆ ಹೆಚ್ಚು  ನಗರ ಮತ್ತು ಪಟ್ಟಣಿಗರಿಗೆ ಮಾತ್ರ ಲಭ್ಯವಾಗಿದೆ ಎಂದ ಅವರು, ವೈದ್ಯರುಗಳು ಗ್ರಾಮೀಣ ಜನರ ಆರೋಗ್ಯದ ಬಗ್ಗೆಯೂ ಅದೇ ಕಾಳಜಿಯನ್ನು ಹೊಂದಿರಬೇಕು. ಹಾಗಾದಾಗ ಜಿಲ್ಲೆಯಲ್ಲಿ ಸಮಗ್ರ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದರು.
ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖ ಗಳು. ವೈಶಿಷ್ಟ್ಯ ಪೂರ್ಣ ಜಿಲ್ಲೆ ಯಲ್ಲಿ ಆರೋಗ್ಯ ಸೇವೆಗೆ ನಿಟ್ಟೆ ಸಂಸ್ಥೆ ನೀಡಿದ ಕೊಡುಗೆ ಗಮ ನೀಯ ಎಂದ ಅವರು, ಗ್ರಾಮೀಣ ಪ್ರದೇ ಶಗಳ ಮೂಲ ಸೌಕರ್ಯ ಗಳ ಬಗ್ಗೆ ಸರ್ಕಾರ ಇನ್ನಷ್ಟು ಪ್ರಾಶಸ್ತ್ಯ ನೀಡ ಬೇಕು. ಜನ ಪ್ರತಿ ನಿಧಿ ಗಳು ಈ ನಿಟ್ಟಿ ನಲ್ಲಿ ತೊಡ ಗಿಕೊ ಳ್ಳಬೇ ಕೆಂದರು.
ಆರೋಗ್ಯದ ಬಗ್ಗೆ ಗಮನ ನೀಡಲು  ಶಿಕ್ಷಣದ ಜೊತೆಗೆ ಅರಿವು ಮೂಡಿಸುವುದರಿಂದ ಮಾತ್ರ ಆರೋಗ್ಯ ಪಾಲನೆ ಸಾಧ್ಯ. ಇಂದಿನ ಮಲೇರಿಯಾ, ಡೆಂಗ್ಯು ವಿಮರ್ಶೆ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅಗತ್ಯ ಎಂದರು. ದಕ್ಷಿಣ ಕನ್ನಡ ಮೆಡಿಕಲ್ ಕಾಲೇಜುಗಳ ತವರೂರು. ನೈರ್ಮಲ್ಯ ಜಿಲ್ಲೆ, ಆದರೆ ವಾಸ್ತವದಲ್ಲಿ ಇಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ ಎಂದರು. ಹಲವುಕೊರತೆಗಳನ್ನು ಸಾಮಾನ್ಯ ಜನರು ಎದುರಿಸುತ್ತಿದ್ದಾರೆ. ಅಗತ್ಯವಿರುವವರಿಗೆ ತಕ್ಷಣ ವೈದ್ಯಕೀಯ ಔಷಧೋಪಚಾರ ನೀಡಬೇಕು. ದೇವರ ಕೆಲಸ ಎಂದರೆ ಬಡಜನರ ಸೇವೆ ಎಂದರು.
ಮಾನಸಿಕ ರೋಗದ ಬಗ್ಗೆ  ನಿಟ್ಟೆಯಲ್ಲಿ ನಡೆಸುತ್ತಿರುವ ಬಗ್ಗೆ, ಅವರ ಜೀವನಶೈಲಿಯ ಬಗ್ಗೆ; ಚಿಕಿತ್ಸೆ ನೀಡುವ ಬಗ್ಗೆ.  ಮಾದಕ ದ್ರವ್ಯಗಳಿಂದಾಗುತ್ತಿರುವ ಹರಡುವ ರೋಗಗಳ ಬಗ್ಗೆಯೂ ಗಮನ ಹರಿಸಬೇಕೆಂದರು. ವಿದ್ಯೆ ಮತ್ತು ಅರಿವಿನಿಂದ ಶೇಕಡ 50 ಸಮಸ್ಯೆ ಪರಿಹಾರ. ಜ್ಞಾನ ವಿಸ್ತರಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಹಳ್ಳಿಗಳೆಡೆಗೆ ನಡುಗೆಯೂ ಅಗತ್ಯ. ರೋಗ ಗುರುತಿಸುವಿಕೆ ಬಹುಮುಖ್ಯ ಮತ್ತೆ ಚಿಕಿತ್ಸೆ. ಮಾನಸಿಕ ಸ್ಥೈರ್ಯ ನೀಡುವ ಕೆಲಸವಾಗಬೇಕು ಎಂದು ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಕಾರ್ಯಾ ಗಾರದ ಅಧ್ಯ ಕ್ಷತೆ ಯನ್ನು  ವಹಿಸಿ ಮಾತ ನಾಡಿದ ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶ್ರೀ ಮತಿ ಕೆ.ಟಿ. ಶೈಲಜಾ ಭಟ್ ಅವರು, ಜನ ಜಾಗೃತಿ ಯಿಂದ ಸಮ ಸ್ಯೆಗಳ ನಿರ್ಮೂಲನೆ ಸಾಧ್ಯ. ರೋಗ ತಡೆಗಟ್ಟುವಿಕೆಗೆ ನೀಡಬೇಕಾದ ಪ್ರಾಶಸ್ತ್ಯ. ನೈರ್ಮಲ್ಯಕ್ಕೆ ನೀಡಬೇಕಾದ  ಗಮನದ ಬಗ್ಗೆ ಮಾತನಾಡಿದರು. ಸರ್ಕಾರದಿಂದ ಸಾಮಾನ್ಯ ಜನರಿಗೆ ಈಗಾಗಲೇ ಹಲವು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನಪ್ರತಿನಿಧಿಗಳ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸವಾಗಬೇಕೆಂದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಉಪಸ್ಥಿತರಿದ್ದರು. ಸ್ವಾಗತ, ಪ್ರ್ರಾಸ್ತಾವಿಕ ಮಾತುಗಳು ಜಿಲ್ಲಾ ಪಂಚಾಯತ್ ಸಿಇಓ  ಡಾ ಕೆ ಎನ್ ವಿಜಯಪ್ರಕಾಶ್ ಅವರಿಂದ.  ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿದ್ಯಾ ಪ್ರಾರ್ಥಿಸಿದರು. ಮೊಹಮ್ಮದ್ ನಝೀರ್ ವಂದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.