Friday, September 28, 2012

ಶರವು ರಸ್ತೆ ಅಗಲೀಕರಣ ಸ್ಥಳ ಪರಿಶೀಲನೆ


ಮಂಗಳೂರು ಸೆಪ್ಟೆಂಬರ್ 28 : ನಗರದ ಪ್ರಮುಖ ಶರವು ರಸ್ತೆ ಅಗಲೀಕರಣ ಸಂಬಂಧ ಮಹಾ ನಗರಪಾಲಿಕೆ ಆಯುಕ್ತರು ಮತ್ತು ಇತರ ಅಧಿಕಾರಿ ಗಳೊಂದಿಗೆ ಜಿಲ್ಲಾಧಿಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಅವರು ಸೆಪ್ಟೆಂಬರ್ 27 ರಂದು ಸಂಜೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಮಾರ್ಗ ದರ್ಶನಗಳನ್ನು ನೀಡಿದರು. ತಕ್ಷಣವೇ ರಸ್ತೆ ಅಗಲೀಕರಣ ಪ್ರಕ್ರಿಯೆ ಯನ್ನು ಮುಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಸದಸ್ಯರಾದ ಶ್ರೀಮತಿ ಆರ್ ಶಾಂತಾ ಅವರು ಉಪಸ್ಥಿತರಿದ್ದರು.