Monday, September 24, 2012

ಸೋಮೇಶ್ವರ ಕುಂಪಲದಲ್ಲಿ 76. 80 ಲಕ್ಷ ರೂ. ಕಾಮಗಾರಿ ಉಸ್ತುವಾರಿ ಸಚಿವರಿಂದ ಉದ್ಘಾಟನೆ

ಮಂಗಳೂರು, ಸೆಪ್ಟೆಂಬರ್. 24 :ಮಂಗಳೂರು ತಾಲೂಕಿನ ಉಳ್ಳಾಲ ಸೋಮೇಶ್ವರ ಕಡಲ ತೀರದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು 76.80 ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿದ್ದು ,ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಇಂದು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾ ಯತ್ ಮಂಗ ಳೂರು ಹಾಗೂ ಪ್ರವಾ ಸೋದ್ಯಮ ಇಲಾಖೆ ಮಂಗ ಳೂರು ಸಂಯು ಕ್ತವಾಗಿ ಆಯೋ ಜಿಸಿದ್ದ ಕಾರ್ಯ ಕ್ರಮದಲ್ಲಿ ಗ್ರಾನೈಟ್ ಕಲ್ಲು ಕಟ್ಟಡದ ಮೆಟ್ಟಿಲು ರಚನೆ, ಪಾತ್ ವೇ ರಚನೆ, ಹೈಮಾಸ್ಟ್ ದೀಪ ಮತ್ತು ಮೆಟ್ಟಲು ರಚನೆ, ಕಡಲ ವೀಕ್ಷಣಾಲಯ, ಸೀಟಿಂಗ್ ಎರೇಂಜ್ ಮೆಂಟ್, ವಾಹನ ನಿಲುಗಡೆ ಸ್ಳಳವನ್ನು 76.80 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದೆ.
ಇದೇ ಸಂದರ್ಭದಲ್ಲಿ ಸೋಮೇಶ್ವರ ಗ್ರಾಮದ ಕುಂಪಲ ಹನುಮಾನ್ ನಗರ, ಚೇತನ್ ನಗರ, ಕುಜುಮಗದ್ದೆ ರಸ್ತೆಗಳ ಕಾಂಕ್ರೀಟಿಕರಣದ ಕಾಮಗಾರಿ ಶಿಲಾನ್ಯಾಸ ನಡೆಸಿ ಮಾತನಾಡಿದ ಉಸ್ತುವಾರಿ ಸಚಿವರು, ನಮ್ಮ ಗ್ರಾಮ ನಮ್ಮ ರಸ್ತೆಗೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ 138.27 ಕಿ.ಮೀ ರಸ್ತೆಗೆ 45 ಕೋಟಿ ರೂ.,
ಅನು ದಾನದ ಬಿಡು ಗಡೆ ಯಾಗಿದ್ದು, ಗ್ರಾ ಮೀಣ ರಸ್ತೆಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿ ಸಲಾ ಗಿದೆ. ಅಭಿ ವೃದ್ಧಿ ಕಾಮ ಗಾರಿ ಗಳ ಅನು ಷ್ಠಾನ ದಲ್ಲಿ ರಾಜ್ಯ ಇತರ ರಿಗಿಂತ ಮುಂಚೂ ಣಿಯಲ್ಲಿದೆ. ರಾಜ್ಯದ ಒಂದು ಕೋಟಿ 6ಲಕ್ಷ ಜನ ನೇರ ಫಲಾ ನುಭವಿ ಗಳಿಗೆ ಸಹಾಯ ವಾಗು ವಂತೆ ಸರ್ಕಾರ ಹಲವು ಕಾರ್ಯ ಕ್ರಮ ಗಳು ಅನು ಷ್ಠಾನಕ್ಕೆ ಬಂದಿವೆ. ಸಮಾನ ಸಮಾಜ ನಿರ್ಮಾಣದ ಸಂಕಲ್ಪದಿಂದ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಭಾ ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಯು ಟಿ ಖಾದರ್, ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಚಂದ್ರಹಾಸ್ ಉಳ್ಳಾಲ, ಚಂದ್ರಶೇಖರ್ ಉಚ್ಚಿಲ, ಸುಶ್ಮಾ ಜನಾರ್ಧನ್, ಗ್ರಾಮಪಂಚಾಯಿತಿ ಅಧ್ಯಕ್ಷ ಕಮಲ,ಬಿಜೆಪಿ ಪಕ್ಷಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಸತೀಶ್ ಕುಂಪಲ ಅವರು ಸ್ವಾಗತಿಸಿದರು.