Tuesday, August 31, 2010

'ಮಕ್ಕಳ ಬಾಲ್ಯ ಶಾಲೆಯಲ್ಲೇ ಅರಳಲಿ' ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಸಂವಾದ

ಮಂಗಳೂರು, ಆಗಸ್ಟ್ 31: ಎಲ್ಲ ಮಕ್ಕಳು ಶಾಲೆಗೆ ಬರಬೇಕು; ವಿದ್ಯೆಯಿಂದ ಯಾವುದೇ ಕಾರಣಕ್ಕೂ ಯಾರದೇ ಮಗುವು ವಂಚಿತವಾಗಬಾರದು ಎಂಬ ಘನ ಉದ್ದೇಶದಿಂದ ರೂಪಿತವಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಸಮಾವೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಸಂತೋಷ್ ಕುಮಾರ್ ಭಂಡಾರಿ ಅವರು ಇಂದು ಕೊಡಿಯಾಲ್ ಬೈಲ್ ನ ಡಯಟ್ ಸಭಾಂಗಣದಲ್ಲಿ ಉದ್ಘಾಟಿಸಿದರು.
ಶಿಕ್ಷಣ ಕಾಯ್ದೆ ಕುರಿತ ಪರಿಣಾ ಮಕಾರಿ ಸಂವಾದ ಸಮಾ ವೇಶವನ್ನು ಉದ್ಘಾಟಿಸಿ ಮಾತ ನಾಡಿದ ಸಂತೋಷ್ ಕುಮಾರ್ ಭಂಡಾರಿ ಯವರು, ಶೈಕ್ಷಣಿಕ ನಗರಿ ಎಂದೇ ಪ್ರಸಿದ್ಧ ವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡ ಲಾಗಿದೆ. ಸರ್ವ ಶಿಕ್ಷಣ ಅಭಿಯಾ ನದಡಿ ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಸಾಕಷ್ಟು ದುಡ್ಡು ಬಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಗುವಿಗೂ ಉತ್ತಮ ಗುಣ ಮಟ್ಟದ ಶಿಕ್ಷಣ ಲಭಿಸಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ದೊಂದಿಗೆ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯು ಟಿ ಖಾದರ್ ಅವರು ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಕೈಗಾರಿಕೆ, ಉದ್ಯಮಗಳಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಅರಿತು ಕೊಂಡು ಕೇಂದ್ರ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮ್ಮ ಯುವ ಜನಾಂಗಕ್ಕೆ ಅಗತ್ಯ ವಿರುವ ಶಿಕ್ಷಣ ಕೊಡುವ ನಿಟ್ಟಿನಲ್ಲಿ ರೂಪು ಗೊಂಡ ಕಾಯ್ದೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ನಿವೃತ್ತ ಸಹ ನಿರ್ದೇಶ ಕರಾದ ಹಾಗೂ ಕರಡು ಸಮಿತಿಯ ಸದಸ್ಯ ರಾದ ಜೋಸೆಫ್ ಅವರು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಸಂವಾದದ ಉದ್ದೇಶವನ್ನು ವಿವರಿಸಿ, ಕೆಲಸದ ಆರಂಭ ಯಶ ಕಂಡಿದೆ; ಎಲ್ಲರ ದೃಷ್ಟಿ ಕೋನ ದಿಂದ ಕಾಯಿದೆ ರೂಪು ಗೊಳ್ಳಲಿ ಎಂಬ ಉದ್ದೇಶ ದೊಂದಿಗೆ ಈ ಕಾಯಿದೆ ಕುರಿತ ಸಂವಾದ ವನ್ನು ಎಲ್ಲ ಜಿಲ್ಲೆಗಳಲ್ಲಿ ಹಮ್ಮಿ ಕೊಂಡಿದ್ದು, ಅಧಿ ನಿಯಮವನ್ನು ಪರಿಣಾ ಮಕಾರಿ ಅನುಷ್ಠಾನಕ್ಕೆ ತರಲಾ ಗುವುದು. ಎಲ್ಲ ಮಕ್ಕಳನ್ನು ಮುಖ್ಯ ವಾಹಿನಿಗೆ ಸೇರಿಸಲು ಈ ಯೋಜನೆ ಸಹಕಾರಿ ಎಂದರು. ಜಿಲ್ಲಾ ಪಂಚಾಯತ್ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಸದಸ್ಯೆ ರಾಜಶ್ರೀ ಹೆಗ್ಡೆ ಅವರು ಮಾತನಾಡಿ, ಉತ್ತಮ ಶಿಕ್ಷಣಕ್ಕೆ ಪೂರಕವಾದ ಎಲ್ಲ ಯೋಜನೆಗಳನ್ನು ಬೆಂಬಲಿಸುವುದಾಗಿ ನುಡಿದರು. ಕಡ್ಡಾಯ ಶಿಕ್ಷಣ ಕಾಯಿದೆ ಖಾಸಗೀಕರಣ, ಜಾಗತೀಕರಣಕ್ಕೆ ಪೂರಕವಾಗದೆ ಗ್ರಾಮ್ಯ ಪ್ರದೇಶದ ಮಕ್ಕಳ ಬೆಳವಣಿಗೆಗೆ ಪೂರಕವಾಗಿರಬೇಕೆಂಬ ಸಂಘಟಿತ ಅಭಿಪ್ರಾಯವನ್ನು ಸಭೆಯಲ್ಲಿರಿಸಿದವರು ರೆನ್ನಿ ಡಿಸೋಜಾ ಅವರು. ಈ ಕಾಯ್ದೆಯ ಬಗ್ಗೆ ಅಭ್ಯಸಿಸಿ, ತಾಲೂಕು ಮಟ್ಟದಲ್ಲಿ ಮಾಡಿದ ಸಭೆಗಳ ಫಲ ಶ್ರುತಿಯನ್ನು ಸಭೆಯ ಮುಂದಿ ಟ್ಟರು. ನೂತನ ಕಾಯಿದೆಯ ಅನುಷ್ಠಾನಕ್ಕೆ ಆಡಳಿತ ಯಂತ್ರದಲ್ಲಿ ಮಾಡಬೇಕಾದ ಬದಲಾವಣೆಯ ಬಗ್ಗೆಯೂ ಅವರು ಗಮನ ಸೆಳೆದರು. ಸಂವಾದದಲ್ಲಿ ಕೊರತೆಗಳು, ಲೋಪದೋಷಗಳ ಬಗ್ಗೆ, ಅಬ್ಜಕ್ಷನ್ಸ್ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಕ್ಯಾಥಲಿಕ್ ಬೋರ್ಡ್ ನ ಫಾದರ್ ವಿಲಿಯಂ, ಎಸ್ ಡಿ ಎಂಸಿ ಅಧ್ಯಕ್ಷರು, ಶಿಕ್ಷಕರು, ಶಿಕ್ಷಣ ತಜ್ಞರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ವರ್ಗದವರು ಸೇರಿದಂತೆ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಡಯಾಟ್ ನ ಉಪನಿರ್ದೇಶಕ (ಆಡಳಿತ) ಫಿಲೋಮಿನಾ ಲೋಬೋ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಂಗ ಉಪನಿರ್ದೇಶಕ ಚಾಮೇಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.