Saturday, August 28, 2010

ಸೆಪ್ಟೆಂಬರ್ 10ರಿಂದ ಆಟೋ ಪ್ರಯಾಣ ದರ ಏರಿಕೆ

ಮಂಗಳೂರು, ಆಗಸ್ಟ್ 28: ಸೆಪ್ಟೆಂಬರ್ 10,2010 ರಿಂದ ಮಂಗಳೂರಿನಲ್ಲಿ ಆಟೋರಿಕ್ಷಾಗಳ ಕನಿಷ್ಠದರ 13 ರಿಂದ 15 ರೂಪಾಯಿ ಹಾಗೂ ಕಿಲೋ ಮೀಟರ್ ಗೆ 9 ರಿಂದ 11 ರೂ.ಗಳಿಗೆ ಏರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಆಟೋರಿಕ್ಷಾ ಚಾಲಕ/ಮಾಲಕರು ಪೆಟ್ರೋಲ್, ಆಯಿಲ್, ಆಟೋರಿಕ್ಷಾ ಮತ್ತು ಆಟೋರಿಕ್ಷಾ ಬಿಡಿ ಭಾಗಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಹೆಚ್ಷಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ವಿಸ್ತೃತ ಚರ್ಚೆ ನಡೆದ ಬಳಿಕ ಆಟೋರಿಕ್ಷಾ ದರ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿದ್ದಾರೆ. ವೈಟಿಂಗ್ ಟೈಮ್ 15 ನಿಮಿಷ ಉಚಿತ ವಾಗಿದ್ದು, ಕನಿಷ್ಠ ದರ ನಿಗದಿ ಸಂದರ್ಭದಲ್ಲಿ ಇದಕ್ಕೆ ಅವಕಾಶ ನೀಡಲಾಗಿಲ್ಲ. 15 ರಿಂದ 45 ನಿಮಿಷ ವೈಟಿಂಗ್ ಟೈಮ್ ನಿಗದಿಪಡಿಸಿದ್ದು, ಈ ಸಂದರ್ಭದಲ್ಲಿ ಆಟೋ ದರದ ಶೇಕಡ 25 ರಷ್ಟು ಜಾಸ್ತಿ ದರವನ್ನು ಪಾವತಿಸಬೇಕು ಎಂದು ಸಭೆ ನಿರ್ಧರಿಸಿತು. ಅಕ್ಟೋಬರ್ ಮೊದಲ ವಾರದೊಳಗೆ ಆಟೋ ಮೀಟರ್ ಬದಲಿಸುವ ಕೆಲಸವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಮಯ ಮಿತಿ ಹಾಕಿದ್ದಾರೆ ಮತ್ತು ಈ ಅವಧಿಯಲ್ಲಿ ಸಾರ್ವಜನಿಕರಲ್ಲಿ ಗೊಂದಲವಾಗದಂತೆ ಆರ್ ಟಿ ಒ ಅವರು ಒದಗಿಸಿದ ದರ ನಿಗದಿಯ ಕಾರ್ಡು ಪ್ರಯಾಣಿಕರಿಗೆ ತೋರಿಸಿ ದರ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. . ರೈಲ್ಷೇ ಸ್ಟೇಷನ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸ ಲಾಗಿದೆ.ರೈಲ್ವೇ ಸ್ಟೇಷನ್ ವ್ಯಾಪ್ತಿ ಕೆನರಾ ಚೇಂಬರ್ಸ್ ಮತ್ತು ಕೆ ಎಸ್ ಆರ್ ಟಿಸಿ ಯನ್ನು ಮಾಜಿ ಸೈನಿಕ ಸಂಘಕ್ಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿ ಕಾರಿಗಳು ತಿಳಿಸಿದರು. ಬೆಂಗಳೂರು ಮಾದರಿ ಯಲ್ಲೇ ಕಡ್ಡಾಯ ವಾಗಿ ಎಲ್ಲಾ ಆಟೋಗಳ ಮೇಲೂ ಆಟೋ ಪರ್ಮಿಟ್ ಹಾಗೂ ಚಾಲಕರ ಲೈಸನ್ಸ್ ನಿಂದ ಹಿಡಿದು ಎಲ್ಲ ಮಾಹಿತಿಯನ್ನು ಸಚಿತ್ರ ಸಹಿತ ಹಾಕಿಸಲು ಸಭೆಯಲ್ಲಿ ನಿರ್ಧರಿಸ ಲಾಯಿತು. 2008 ರಲ್ಲಿ ನಿಗದಿಯಾಗಿದ್ದ ದರವನ್ನು ಇಂದಿನ ಸಭೆಯಲ್ಲಿ ಪರಿಷ್ಕರಿ ಸಲಾಗಿದ್ದು, ದರ ಏರಿಕೆ ಬಗ್ಗೆ ಆಟೋ ರಿಕ್ಷಾ ಚಾಲಕರು ಸಂತಸ ವ್ಯಕ್ತ ಪಡಿಸಿದರು. ಸಭೆಯಲ್ಲಿ ಪ್ರಯಾಣಿಕ ರೊಂದಿಗೆ ಆಟೋ ಚಾಲಕರ ವರ್ತನೆ, ಆಟೋಗಳಿಗೆ ಎಲ್ ಪಿಜಿ ಗ್ಯಾಸ್ ಅಳವಡಿಕೆ ಕುರಿತ ಸಮಸ್ಯೆ, ಆಟೋ ಗಳಲ್ಲಿ ಸರಕು ಸಾಗಿಸು ತ್ತಿರುವ ಬಗ್ಗೆ, ಸರ್ಕಾರಿ ಹಾಗೂ ಬ್ಯಾಂಕ್ ನೌಕರರು ಆಟೋ ಹೊಂದಿರುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಆಟೋ ಚಾಲಕರು ಪ್ರಯಾಣಿಕ ರೊಂದಿಗೆ ಮತ್ತು ಸಾರ್ವ ಜನಿಕ ರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಭೆಯಲ್ಲಿ ಕೋರ ಲಾಯಿತು. ಪ್ರೀ ಪೇಯ್ಡ್ ಆಟೋ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಕಾನೂನು ಉಲ್ಲಂಘಿಸುವ ಆಟೋ ಚಾಲಕರ ಪರವಾನಿಗೆ ರದ್ದು ಗೊಳಿಸ ಲಾಗುವುದು ಎಂದೂ ಸಭೆಯಲ್ಲಿ ಜಿಲ್ಲಾಧಿ ಕಾರಿಗಳು ಎಚ್ಚರಿಸಿದರು. ಆರ್ ಟಿ ಒ ಸೇವಾ ನಾಯ್ಕ್, ಡಿಸಿಪಿ( ಅಪರಾಧ ಮತ್ತು ಸಂಚಾರ) ಮುತ್ತೂರಾಯ, ವಿವಿಧ ಆಟೋ ಚಾಲಕ ಮತ್ತು ಮಾಲಕ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು, ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಮತ್ತಿತರು ಸಭೆಯಲ್ಲಿ ಪಾಲ್ಗೊಂಡಿದ್ದರು.