Monday, August 23, 2010

ಮಂಗಳೂರು ನಗರದಲ್ಲಿ 54 ಕೋಟಿ ರೂ.ಗಳ 10 ಯೋಜನೆಗಳಿಗೆ ಚಾಲನೆ

ಮಂಗಳೂರು,ಆಗಸ್ಟ್ 23:ಮಂಗಳೂರಿನಲ್ಲಿ ಸುಮಾರು 54 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,
ಕದ್ರಿ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ., ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ದುರಸ್ತಿಗೆ 50 ಲಕ್ಷ ರೂ., ಮಂಗಳಾ ಕ್ರೀಡಾಂ ಗಣಕ್ಕೆ ಸಿಂಥೆಟಿಕ್ ಟ್ರಾಕ್ ರಚನೆಗೆ 2 ಕೋಟಿ ರೂ., ಮಂಜೂರು ಮಾಡಲಾಗಿದೆ. ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ 6 ಕೋಟಿ ರೂ., ಕಮಿಷ ನರೇಟ್ ಕಚೇರಿ ಕಟ್ಟಡಕ್ಕೆ 3 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಮುಖ್ಯ ಮಂತ್ರಿಗಳು ಪ್ರಕಟಿ ಸಿದರು. ನಗರದ ಕಾರ್ಯ ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿರಾದ ಕೃಷ್ಣ ಪಾಲೆಮಾರ್, ಶಾಸಕರಾದ ಎನ್.ಯೋಗೀಶ್ ಭಟ್, ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್, ಮಲ್ಲಿಕಾ ಪ್ರಸಾದ್,ಮೇಯರ್ ರಜನಿ ದುಗ್ಗಣ್ಣ, ಕ್ಯಾ. ಗಣೇಶ್ ಕಾರ್ಣಿಕ್, ಕೋಟಾ ಶ್ರೀನಿ ವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ನಾಗ ರಾಜ್ ಶೆಟ್ಟಿ,ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಡಿಜಿಪಿ ಅಜಯ್ ಕುಮಾರ್ ಸಿಂಗ್,ಐಜಿಪಿ ಗೋಪಾಲ್ ಬಿ.ಹೊಸೂರು,ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಎಸ್ ಪಿ ಡಿಕೆ ಡಾ. ಸುಬ್ರಹ್ಮ ಣ್ಯೇಶ್ವರ ರಾವ್, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತ ಡಾ. ವಿಜಯಪ್ರಕಾಶ್, ಸಿಇಒ ಪಿ.ಶಿವಶಂಕರ್ ಮತ್ತಿತರ ಗಣ್ಯರು ಪಾಲ್ಗೊಂ ಡಿದ್ದರು.