Friday, August 13, 2010

ಹೊಸ ತಂತ್ರಜ್ಞಾನ ಆವಿಷ್ಕರಿಸಿ ರೈತರಿಗೆ ನೆರವಾಗಿ; ಮುಖ್ಯಮಂತ್ರಿ ಕರೆ

ಮಂಗಳೂರು,ಆ.13: ದೇಶದ ಕೃಷಿ, ಆರ್ಥಿಕ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳು ಪ್ರಮುಖ ಪಾತ್ರ ವಹಿಸಬೇಕಿದ್ದು,ತಮ್ಮ ನೂತನ ಆವಿಷ್ಕಾರಗಳಿಂದ ಕೃಷಿ ಅಭಿವೃದ್ಧಿ,ಇಂಧನ ಮತ್ತು ನೀರು ನಿರ್ವಹಣೆಗೆ ನೆರವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಅವರಿಂದು ಎನ್ ಐ ಟಿ ಕೆಯಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾ ಡುತ್ತಿದ್ದರು. 1960 ರಿಂದಲೂ ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಕಾಲೇಜು ಉತ್ತಮ ಹೆಸರನ್ನು ಗಳಿಸಿದ್ದು ಸಮಾಜಕ್ಕೆ ತನ್ನದೇ ರೀತಿಯ ಕೊಡುಗೆ ನೀಡುತ್ತಿದೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ಇಂಜಿನಿಯರ್ ಗಳು ತಮ್ಮ ಸಂಶೋಧನೆ ಗಳಿಂದ ಕೃಷಿ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ಗಳನ್ನು ನೀಡಬೇಕು. ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಬೆಳೆಯಲು ನೂತನ ಆವಿಷ್ಕಾರಗಳನ್ನು ಕಂಡು ಹಿಡಿಯ ಬೇಕೆಂದು ಅವರು ವಿಜ್ಞಾನಿಗಳಿಗೆ ಸಲಹೆ ಮಾಡಿದರು. ಜಗತ್ತು ಬಹು ನಿರೀಕ್ಷೆಯಿಂದ ಭಾರತದತ್ತ ಯುವಶಕ್ತಿಯನ್ನು ಗಮನಿಸಿದ್ದು, ನಿರೀಕ್ಷೆ ಹೆಚ್ಚಿದೆ; ಇದಕ್ಕೆ ಪೂರಕವಾಗಿ ನಮ್ಮ ಯುವಜನಾಂಗ ಸ್ಪಂದಿಸಬೇಕಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದಿಂದಾಗಿ ರಾಜ್ಯದಲ್ಲಿ 5ಲಕ್ಷ ಕೋಟಿ ರೂ.ಗಳ ಹೂಡಿಕೆ ನಿರೀಕ್ಷಿಸಲಾಗಿದೆ. 10ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಐಟಿ ಬಿಟಿ ಕ್ಷೇತ್ರದ ಬಗ್ಗೆ ಅಮೇರಿಕದ ಅಧ್ಯಕ್ಷರಿಂದ ಶ್ಲಾಘನೆ ವ್ಯಕ್ತವಾಗಿದೆ ಎಂದು ಅವರು ನುಡಿದರು. ಎನ್ ಐ ಟಿ ಕೆ ದೇಶದ ಅಭಿವೃದ್ಧಿಗೆ ಪರಿಣಾಮಕಾರಿ ಕೊಡುಗೆ ನೀಡಬೇಕೆಂದರು.ಇದಕ್ಕೂ ಮೊದಲು ಕ್ಯಾಂಪಸ್ ನೊಳಗೆ ವಿದ್ಯಾರ್ಥಿ ಗಳಿಗಾ ಗಿರುವ ಮೆಗಾ ಹಾಸ್ಟೆಲ್ ಕಾಂಪ್ಲೆಕ್ಸ ನ್ನು ಉದ್ಘಾಟಿ ಸಿದರು. ತಮ್ಮ ಭಾಷಣ ದುದ್ದಕ್ಕೂ ದಿವಂಗತ ಸಂಸದ ಶ್ರೀನಿವಾಸ ಮಲ್ಯರ ದೂರ ದೃಷ್ಟಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಡಾ. ವಿ. ಎಸ್. ಆಚಾರ್ಯ ಅವರು ಇಂಡಿಯನ್ ಪೋಸ್ಟಲ್ ಸ್ಪೆಷಲ್ ಕವರ್ ನ್ನು ಬಿಡುಗಡೆ ಮಾಡಿ,ಎನ್ ಐ ಟಿ ಕೆ ಸೇರಿದಂತೆ ಉಳಿದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಬೇಕಿದೆ ಎಂದರು. ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿ ಯಲ್ಲಿ ರಾಜ್ಯ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೊಂದನ್ನು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು, ಶಿಕ್ಷಣ ವ್ಯಾಪಾರೀಕರಣ ವಾಗುತ್ತಿ ರುವುದಕ್ಕೆ ವಿಷಾದ ವ್ಯಕ್ತ ಪಡಿಸಿ ದರಲ್ಲದೆ ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಗಳನ್ನು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ ದಿವಂಗತ ಸಂಸದ ಶ್ರೀನಿವಾಸ ಮಲ್ಯ ಅವರ ಕೊಡುಗೆ ಅಪಾರ ವಾಗಿದ್ದು, ಅಭಿವೃದ್ಧಿ ಕ್ಷೇತ್ರದಲ್ಲಿ ಇಂದಿಗೂ ಅವರನ್ನು ಮೀರಿಸಿದ ರಾಜ ಕಾರಣಿಗಳಿಲ್ಲ. ನಮಗೆಲ್ಲ ಅವರೇ ಮಾದರಿ ಎಂದರು. ಎನ್ ಐ ಟಿ ಕೆಯ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಪ್ರೊ. ಗೋವರ್ಧನ ಮೆಹ್ತಾ ಅಧ್ಯಕ್ಷತೆ ವಹಿಸಿದ್ದರು. ಡೈರೆಕ್ಟರ್ ಪ್ರೊ. ಸಂದೀಪ್ ಸಂಚೈತಿ ಸ್ವಾಗತಿಸಿದರು.