Monday, August 2, 2010

ಮೆಗಾ ಆದಾಲತ್ ಗೆ ಚಾಲನೆ

ಮಂಗಳೂರು,ಆಗಸ್ಟ್ 02:ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿ ಕೊಂಡಿರುವ ಮೆಗಾ ಲೋಕ ಆದಾಲತ್ ಕಾರ್ಯಕ್ರಮಕ್ಕೆ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು. ಗೌರನ್ವಿತ ಜಿಲ್ಲಾ ಸತ್ರ ನ್ಯಾಯಾ ಧೀಶರಾದ ಎಚ್. ಆರ್.ದೇಶ ಪಾಂಡೆ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ, ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ, ಹಿರಿಯ ನ್ಯಾಯಾವಾದಿ ಸೀತರಾಂ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ|ರಾಧಾ ಕೃಷ್ಣ ಹೊಳ್ಳ, ಮತ್ತು ಇತರ ಗೌರನ್ವಿತ ನ್ಯಾಯಾ ಧೀಶರುಗಳು,ವಕೀಲರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 2011 ಮಾರ್ಚ್ ತಿಂಗಳ ಕೊನೆಯ ವರೆಗೆ ಈ ಆದಾಲತ್ ನಿರಂತರವಾಗಿ ನಡೆಯಲಿದೆ.