Friday, August 27, 2010

ನಾಗರಿಕ ಸ್ನೇಹಿ ಪೊಲೀಸ್ ವ್ಯವಸ್ಥೆ: ಐಜಿಪಿ ಅಲೋಕ್ ಎಂ.

ಮಂಗಳೂರು,ಆಗಸ್ಟ್ 27:ಕರಾವಳಿ ಪಶ್ಚಿಮವಲಯ ವೈವಿಧ್ಯಮಯ ಪ್ರದೇಶವಾಗಿದ್ದು, ಬಹುಭಾಷೆ, ಬಹುಧರ್ಮಗಳ ಜನರಿದ್ದು ಜನಜೀವನ ಸುಗಮವಾಗಿ ಸಾಗುವಂತೆ ಕಾನೂನಿನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತದೆ ಎಂದು ಪಶ್ಚಿಮ ವಲಯದ ನೂತನ ಪೊಲೀಸ್ ಮಹಾ ನಿರೀಕ್ಷಕ ಅಲೋಕ್ ಮೋಹನ್ ಹೇಳಿದರು.ಪಶ್ಚಿಮ ವಲಯದ ನೂತನ ಮಹಾ ನಿರೀಕ್ಷಕರಾಗಿ ಮಂಗಳೂ ರಿನಲ್ಲಿ ಅಧಿಕಾರ ಸ್ವೀಕರಿದ ಅವರು ತನ್ನ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಪೊಲೀಸರು ಜನತೆಯೊಂದಿಗೆ ಸೌಹಾರ್ದ ಯುತವಾಗಿ ವರ್ತಿಸಲು ಮತ್ತು ಯಾವುದೇ ಜನಪರ ಸಮಸ್ಯೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಲಾಖೆಯನ್ನು ಮುಕ್ತವಾಗಿಸಲು ವ್ಯವಸ್ಥೆ ರೂಪಿಸಲಾಗುವುದು ಎಂದು ಅವರು ಹೇಳಿದರು. ದೂರ ದೃಷ್ಟಿಯನ್ನಿ ರಿಸಿಕೊಂಡು ಕರ್ತವ್ಯ ನಿರ್ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ಹಾಗೂ ಇಲಾಖೆಯ ಬೆಳವಣಿಗೆ ಮಾಧ್ಯಮಗಳ ಮೂಲಕ ಜನರಿಗೆ ವಿಳಂಬ ವಾಗದಂತೆ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಐಜಿಪಿಯವರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಉತ್ತಮ ವಾಗಿದ್ದು, ಕಾನೂನು ಉಲ್ಲಂಘನೆ ಅಥವಾ ಇನ್ನಿತರ ಯಾವುದೇ ಸಮಾಜ ವಿರೋಧಿ ಚಟುವಟಿ ಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ. ಸುಬ್ರಹ್ಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು.
ಅಲೋಕ್ ಮೋಹನ್IPS: ಅಲೋಕ್ ಮೋಹನ್ 1987ರ ಭಾರತೀಯ ಪೊಲೀಸ್ ಸೇವೆ ಅಧಿಕಾರಿ. 23ವರ್ಷ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಮತ್ತು ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ದೆಹಲಿಯ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪ್ರಧಾನ ಕಾರ್ಯಾಲಯದಲ್ಲಿ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾಗಿ ಸೇವೆ. ಉಪ ಪೊಲೀಸ್ ಮಹಾ ನಿರೀಕ್ಷಕ ಸಿಐಡಿ ಬೆಂಗಳೂರು. ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬೆಂಗಳೂರು ನಗರ. ಪೊಲೀಸ್ ಮಹಾನಿರೀಕ್ಷಕ ಬೆಂಗಳೂರು ಮಹಾನಗರ ಕಾರ್ಯಪಡೆ. ಮಹಾನಿರೀಕ್ಷಕ ಅನುಷ್ಠಾನ ಮತ್ತು ಜಾಗೃತ ದಳ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಲ್ಲಾ ಎಸ್ಕಾಂ ಬೆಂಗಳೂರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮಾಂಡರ್ ಅಂತಾರಾಷ್ಟ್ರೀಯ ಪೊಲೀಸ್ ಕಾರ್ಯಪಡೆ, ಯುನೈಟೆಡ್ ನೇಷನ್ಸ್ ಶಾಂತಿಪಾಲಾ ಕಾರ್ಯಪಡೆ ಬೋಸ್ನಿಯಾ. ಬ್ರಿಟಿಷ್ ಪೊಲೀಸ್ ಜೊತೆ ಕಮಾಂಡೋ ತರಬೇತಿ. ಪ್ರಶಸ್ತಿ: ಎರಡು ಬಾರಿ ಮಹಾನಿರ್ದೇಶಕರ ಪ್ರಶಂಸಾ ಪತ್ರ. ಯುನೈಟೆಡ್ ನೇಷನ್ಸ್ ಶಾಂತಿಪದಕ. ರಾಷ್ಟ್ರಪತಿಯವರ ಪೊಲೀಸ್ ಪದಕ.