Monday, August 23, 2010

ರಾಜ್ಯಕ್ಕೆ ಮಾದರಿ ಮಂಗಳೂರಿನ ಮನೆಗಳು: ಸಿ ಎಂ

ಮಂಗಳೂರು,ಆಗಸ್ಟ್ 23:ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದು,ಇದಕ್ಕಾಗಿ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನತೆ ಇದರ ಲಾಭ ಪಡೆಯಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಹೇಳಿದ್ದಾರೆ.
ವಿವಿಧ ಅಭಿವೃದ್ದಿ ಕಾರ್ಯ ಕ್ರಮಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯ ಮಂತ್ರಿಗಳು ನಗರದ ಉರ್ವ ಮಾರುಕಟ್ಟೆ ಬಳಿ ಪಾಲಿಕೆ ವತಿಯಿಂದ ಪರಿಶಿಷ್ಟ ಪಂಗಡದ ಶೇಕಡ 22.75 ರ ಅನುದಾನದಲ್ಲಿ ನಿರ್ಮಿಸಿರುವ 21 ನೂತನ ಮನೆಗಳ ಹಸ್ತಾಂತರ ಮತ್ತು ಮಲೆನಾಡು ಪ್ರದೇಶಾ ಭಿವೃದ್ದಿ ಅನುದಾನದಲ್ಲಿ ನಿರ್ಮಾಣ ಗೊಂಡಿರುವ ನೂತನ ಸಭಾ ಭವನವನ್ನು ಉದ್ಘಾಟಿಸಿ ಮಾತ ನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ದಿಗಾಗಿ ನಗರಾಭಿವೃದ್ಧಿಗೆ ನೀಡಿದ 100 ಕೋಟಿ ರೂಪಾಯಿಗಳಲ್ಲಿ 5ಕೋಟಿ ರೂಪಾಯಿಯನ್ನು ಮುಂದಿನ ಸಾಲಿನಲ್ಲಿ ಮೀಸಲಿಡಬೇಕೆಂದು ಸಿ ಎಂ ನುಡಿದರು.ಸಮಾ ರಂಭದಲ್ಲಿ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ,ಜಿಲ್ಲಾ ಉಸ್ತುವರಿ ಸಚಿವ ಕೃಷ್ಣಾ ಜೆ.ಪಾಲೇಮಾರ್,ಮಂಗಳೂರು ಮೇಯರ್ ರಜನಿ ದುಗ್ಗಣ್ಣ,ಶಾಸಕ ಎನ್ ಯೋಗಿಶ್ ಭಟ್,ಸಂಸದ ನಳೀನ್ ಕುಮಾರ್ ಕಟೀಲ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆ ಸದಸ್ಯರುಗಳು,ಅಧಿಕಾರಿಗಳು ಮತ್ತಿರರ ಗಣ್ಯರು ಸಮಾ ರಂಭದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು ರಾಜ್ಯದ ಕೈಗಾರಿಕೆ ಮತ್ತು ರೈತರಿಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್ತನ್ನು ನೀಡಲು ಸರ್ಕಾರ ಬದ್ದವಾಗಿದೆ.ಇತರ ವಿವಿಧ ಮೂಲಗಳಿಂದ ವಿದ್ಯುತ್ತನ್ನು ಖರೀದಿಸಿ ನೀಡಲು ಕ್ರಮ ಕೈ ಗೊಳ್ಳಲಾಗಿದೆ ಎಂದರು.ಕುಡುಪು ದೇವಾಲಯದ ಅಭಿವೃದ್ದಿಗೆ ಒಂದು ಕೋಟಿಯನ್ನು ಬಿಡುಗಡೆ ಆದೇಶವನ್ನು ತಂದಿದ್ದು, ತಕ್ಷಣ ಕಾಮಾಗಾರಿಯನ್ನು ಆರಂಭಿಸಲು ಸೂಚಿಸ ಲಾಗಿದೆ.ಜನತೆಯ ಹಿತಕ್ಕಾಗಿ ಅಧಿಕಾರದ ಸದ್ಬಳಕೆ ಮಾಡುತ್ತಿದ್ದು,ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದರು.