Thursday, August 19, 2010

ಛಾಯಾಚಿತ್ರ ಪ್ರದರ್ಶನ

ಮಂಗಳೂರು,ಆಗಸ್ಟ್ 19:ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ದಾಯ್ಜಿ ವಲ್ಡ್ ದಶಮನೋತ್ಸವ ಅಂಗವಾಗಿ ಛಾಯಾ ಚಿತ್ರಗ್ರಾಹಕ ದಯಾನಂದ ಕುಕ್ಕಾಜೆಯವರ ಎರಡು ದಿನಗಳ ಛಾಯಾ ಚಿತ್ರ ಪ್ರದರ್ಶನ ವನ್ನು ಸಂತ ಅಲೋಷಿ ಯಸ್ ಕಾಲೇಜು ಸಭಾಂಗಣದಲ್ಲಿ ಇಂದು ಯುಎಇ ಎಕ್ಸ್ಚೇಂಜ್ ಸಿಇಒ ಸುಧೀರ್ ಶೆಟ್ಟಿ ಉದ್ಘಾಟಿ ಸಿದರು.ದಾಯ್ಜಿ ವರ್ಲ್ಡ್ ಮತ್ತು ಸಂತ ಅಲೋಷಿ ಯಸ್ ಪತ್ರಿ ಕೋದ್ಯಮ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಅಪ ರೂಪದ ಛಾಯಾ ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಪರಿಷತ್ ಅಕಾಡೆಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್,ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ, ದಾಯ್ಜಿ ವಲ್ಡ್ ನ ವಾಲ್ಟರ್ ನಂದಳಿಕೆ ಮತ್ತಿತರ ಗಣ್ಯರು ಉಪಸ್ಥಿತ ರಿದ್ದರು. ಇಂದು ಮತ್ತೆ ನಾಳೆ ಬೆ.10.30 ರಿಂದ ಸಂಜೆ 6 ಗಂಟೆ ವರೆಗೆ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತ ವಾಗಿರುತ್ತದೆ.