Tuesday, August 10, 2010

ವನಮಹೋತ್ಸವ

ಮಂಗಳೂರು,ಆಗಸ್ಟ್ 10: ಮುಡಿಪುವಿನ ಜವಾಹರ ನವೋದಯ ಶಾಲೆಯಲ್ಲಿ ಇಂದು ಏರ್ಪಡಿಸಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಸಹಾಯಕ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಉದ್ಘಾಟಿಸಿದರು.
ಬಂಟ್ವಾಳ ತಾಲೂಕು ತೋಟ ಗಾರಿಕಾ ಸಹಾಯಕ ನಿರ್ದೇಶಕರಾದ ಸಂಜೀವ ನಾಯಕ್ ಅವರು ಶಾಲೆಗೆ ಮಲ್ಲಿಗೆ ಗಿಡಗಳನ್ನು ನೀಡಿ ಪರಿಸರದ ಬಗ್ಗೆ ಮಕ್ಕಳಿಗೆ ಮಾಹಿತಿ ಯನ್ನು ನೀಡಿದರು. ಶಾಲಾ ಪ್ರಾಂಶು ಪಾಲರಾದ ಸಾಕ್ರೆಟಿಸ್, ಉಪ ಪ್ರಾಂಶು ಪಾಲರಾದ ಶ್ರೀಲತಾ, ದಿನೇಶ್ ನಾಯಕ್ ಉಪಸ್ಥಿತರಿದ್ದರು. ಬರಡು ಗುಡ್ಡೆಯಾಗಿದ್ದ 30 ಎಕರೆ ಶಾಲಾ ಪ್ರದೇಶ ಎಲ್ಲರ ಸಹಕಾರದಿಂದ ಹಸಿರಿನಿಂದ ನಳ ನಳಿಸುತ್ತಿದೆ.