Wednesday, July 8, 2009

ಸಚಿವ ಪಾಲೇಮಾರ್ ಅವರಿಂದ ವೆನ್ಲಾಕ್ ಭೇಟಿ



ಮಂಗಳೂರು.ಜೂನ್ 8 : ಜಿಲ್ಲಾ ಉಸ್ತುವರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಇಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಅಡುಗೆ ಕೋಣೆ ಮತ್ತು ಔಷಧ ಉಗ್ರಣದ ಪರಿಶೀಲನೆ ನಡೆಸಿದರು.ಶಾಸಕ ಯೋಗಿಶ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗನ್ನಾಥ್,ಆಸ್ಪತ್ರೆಯ ಡಿ.ಎಂ.ಓ. ಡಾ. ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.