Tuesday, July 28, 2009

ತೋಟಗಾರಿಕಾ ಮಿಷನ್: ರೈತರಿಗೆ ಸಹಾಯಧನ

ಮಂಗಳೂರು, ಜು.28: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ರಾಷ್ಟ್ರೀಯ ಔಷಧೀಯ ಬೆಳೆಗಳ ಮಿಷನ್ ಯೋಜನೆಯಡಿ ರೈತರಿಗೆ ಸಹಾಯಧನ ಸೌಲಭ್ಯಗಳು ಲಭ್ಯವಿದ್ದು, ರೈತರು ಈ ಸಂಬಂಧ ತೋಟಗಾರಿಕೆ ಉಪನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ.
ನರ್ಸರಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ %50ರ ಸಹಾಯಧನ, ಪ್ರದೇಶ ವಿಸ್ತರಣೆಗೆ ಸಹಾಯಧನ, ಸುರಕ್ಷಿತ ಬೇಸಾಯ ಕ್ರಮದಡಿ ಹಸಿರು ಮನೆ ನಿರ್ಮಾಣಕ್ಕೆ %33ರಿಂದ 50ರ ಸಹಾಯಧನ, ನೀರಿನ ಸಂರಕ್ಷಣೆಗೆ ಸಮುದಾಯ ಕೆರೆಗಳ ಸ್ಥಾಪನೆಗೆ ರೂ. 10 ಲಕ್ಷ ಸಹಾಯಧನ, ನೀರಿನ ಸಂರಕ್ಷಣೆಗೆ ಸಮುದಾಯ ಕೆರೆಗಳ ಸ್ಥಾಪನೆಗೆ ರೂ. 10 ಲಕ್ಷ ಸಹಾಯಧನ, ತೋಟಗಾರಿಕೆ ಬೆಳೆಗಳ ಬಗ್ಗೆ ಮೇಳ,ಪ್ರದರ್ಶನ ಏರ್ಪಡಿಸಲು ಸಹಾಯಧನ, ರೈತರಿಗೆ ರಾಜ್ಯ ಹಾಗೂ ಹೊರ ರಾಜ್ಯ ಪ್ರವಾಸ, ಸಾವಯವ ಬೇಸಾಯ ಪರಿವರ್ತನೆಗೆ ಹಾಗೂ ದೃಢೀಕರಣಕ್ಕೆ ಸಹಾಯಧನ, ಹಳೆ ಗೇರು ತೋಟದ ಪುನಶ್ಚೇತನಕ್ಕೆ 15,000ಹೆ. ಸಹಾಯಧನ ಒದಗಿಸಲಾಗುವುದು.
ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆಗೆ ಪ್ಯಾಕ್ ಹೌಸ್, ಶೀಥಲ ಗೃಹ ಸ್ಥಾಪನೆ, ಶೀತಲ ವಾಹನಗಳಿಗೆ ಹಾಗೂ ಪ್ರಾಥಮಿಕ ಸಂಸ್ಕರಣ ಘಟಕ ಸ್ಥಾಪನೆ, ಮೌಲ್ಯ ವರ್ಧನೆ ಮಾಡುವ ಘಟಕ ಸ್ಥಾಪನೆಗೆ %25ರ ಸಹಾಯಧನ ಒದಗಿಸಲು ಅವಕಾಶವಿರುತ್ತದೆ. ತೋಟಗಾರಿಕೆ ಸಂಸ್ಕರಣ ಯೋಜನೆಯಡಿ %25ರ ಸಹಾಯಧನ ಒದಗಿಸಲು ಅವಕಾಶವಿದೆ.
ಗ್ರಾಮೀಣ ಮಾರುಕಟ್ಟೆ, ಸಗಟು ಮಾರುಕಟ್ಟೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ % 25 ಸಹಾಯಧನ ಒದಗಿಸಲಾಗುವುದು. ಈ ಸಂಬಂಧ ಆಸಕ್ತರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ. ದೂ.ಸಂ. 0824 2423628