Tuesday, July 14, 2009

ಸುಳ್ಯ: ಸುಬ್ರಮಣ್ಯ, ಬೆಳ್ಳಾರೆಯಲ್ಲಿ ಗ್ರಾಮಸಂಪರ್ಕ, ಗ್ರಾಮವಾಹಿನಿ

ಮಂಗಳೂರು, ಜುಲೈ, 14: ವಾರ್ತಾ ಇಲಾಖೆ ವತಿಯಿಂದ ಸುಳ್ಯ ತಾಲೂಕಿನ ಬೆಳ್ಳಾರೆ, ಸುಬ್ರಮಣ್ಯ ಪರಿಸರದಲ್ಲಿ ಗ್ರಾಮಸಂಪರ್ಕ ಮತ್ತು ಗ್ರಾಮವಾಹಿನಿ ಕಾರ್ಯಕ್ರಮಗಳನ್ನು ದಿ. 13.7.09ರಿಂದ ಹಮ್ಮಿಕೊಳ್ಳಲಾಗಿದ್ದು, ಗಣೇಶ್ ನಾವಡ ಅವರ ನೇತೃತ್ವದಲ್ಲಿ ನಾಟಕ ತಂಡ ಮತ್ತು ಇಲಾಖೆಯ ಸಿನಿ ಚಾಲಕರಾದ ಫ್ರಾನ್ಸಿಸ್ ಲೂಯಿಸ್, ಚಾಲಕ ವೇಣುಗೋಪಾಲ್, ವಿಶ್ವನಾಥ ಜೋಗಿ ಅವರು ಸ್ಥಳೀಯರಿಗೆ ಸ್ವಚ್ಛತೆ, ಆರೋಗ್ಯ ಮತ್ತು ಸರ್ಕಾರದ ಸಾಧನೆಗಳ ಕುರಿತ ಮಾಹಿತಿಯನ್ನು ಚಲನಚಿತ್ರಗಳ ಮೂಲಕ ನೀಡುತ್ತಿದ್ದಾರೆ. ಐವರ್ನಾಡು ಗ್ರಾಮಪಂಚಾಯಿತಿಯ ಸಹಕಾರಿ ಬ್ಯಾಂಕ್ ಆವರಣದಲ್ಲಿ ಜು. 20ರಂದು ಸಾಂಕ್ರಾಮಿಕ ರೋಗ ಮತ್ತು ಸ್ವಚ್ಛತೆಯ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.