Thursday, July 16, 2009

ರಾಷ್ಟ್ರೀಯ ವಿಪತ್ತು ನಿರ್ವಹಣ ದಳದಿಂದ ಅಣಕು ಪ್ರದರ್ಶನ


ಮಂಗಳೂರು, ಜು.16: ಕರಾವಳಿ ಪ್ರದೇಶಗಳಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸದಸ್ಯರು ಮಂಗಳೂರಿನ ಕಲ್ಲಾಪು ನೇತ್ರಾವತಿ ನದಿಯಲ್ಲಿ ಅಣಕು ವಿಪತ್ತು ನಿರ್ವಹಣಾ ಪ್ರದರ್ಶನ ನಡೆಸಿತು.ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಸಂಯುಕ್ತವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಸೇರಿದಂತೆ ವಿಪತ್ತು ನಿರ್ವಹಣೆ ಸಿಇಒ ಹಾಗೂ ಮಂಗಳೂರು ಎಸಿಯವರಾದ ಪ್ರಭುಲಿಂಗ ಕವಳಿಕಟ್ಟೆ, ಎನ್ ಡಿ ಆರ್ ಎಫ್ ನ ಅಸಿಸ್ಟೆಂಟ್ ಕಮಾಂಡರ್ ಆರ್ ಎ ರಣ್ ಮುಂಗ್ ಮತ್ತಿತರರು ಪಾಲ್ಗೊಂಡಿದ್ದರು.