Saturday, July 25, 2009

ಘನವಾಹನಗಳ ಸಂಚಾರ ನಿಷೇಧ

ಮಂಗಳೂರು,ಜು.25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವುದರಿಂದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಾದ 48,13ಮತ್ತು 17ರ ರಸ್ತೆ ಮತ್ತು ಸೇತುವೆಗಳು ಹದಗೆಟ್ಟಿವೆ.ಕಾರವಾರ ಮತ್ತು ಬೆಲೇಕೇರಿ ಬಂದರುಗಳು ಮಳೆಗಾಲದಲ್ಲಿ ಚಟುವಟಿಕೆ ಇಲ್ಲದ ಕಾರಣ ಅಲ್ಲಿಗೆ ಬರುತ್ತಿದ್ದ ಅದಿರು ಲಾರಿಗಳು ನವಮಂಗಳೂರು ಬಂದರು ಕಡೆಗೆ ಆಗಮಿಸುತ್ತಿವೆ.ಪ್ರತಿದಿನ 1400ಕ್ಕೂ ಅಧಿಕ ಲಾರಿಗಳು ನವಮಂಗಳೂರು ಬಂದರನ್ನು ಪ್ರವೇಶಿಸುತ್ತಿರುವುದರಿಂದ ಹೆದ್ದಾರಿಗಳು ಹಾನಿಗೀಡಾಗುತ್ತಿವೆ.ಇದರಿಂದ ಜನಜೀವನ ಅಸ್ತವ್ಯಸ್ತಗೊಳ್ಳುವ ಹಿನ್ನಲೆಯಲ್ಲಿ ಈ ಹೆದ್ದಾರಿಗಳಲ್ಲಿ ಜಿಲ್ಲಾಡಳಿತ ಘನವಾಹನ ನಿಷೇಧಿಸಿದೆ.
27.7.09ರ ಮಧ್ಯರಾತ್ರಿಯಿಂದ 31.08. 09ರವರೆಗೆ ದ.ಕ. ಜಿಲ್ಲೆಯ ಈ ಪ್ರಮುಖ 3 ರಾ. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಅಧಿಕ ಭಾರ ಹೊತ್ತು ಸಂಚರಿಸುವ ಸರಕು ವಾಹನಗಳ ಮತ್ತು ಅದಿರು ಲಾರಿಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್. ಎ. ಪ್ರಭಾಕರ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ.
ಆದರೆ ಈ ನಿಷೇಧ ದಿನಬಳಕೆಯ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಅನ್ವಯಿಸುವುದಿಲ್ಲ.