Thursday, February 21, 2013

ಪಾಲಿಕೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ


ಮಂಗಳೂರು, ಫೆಬ್ರವರಿ.21: ಮಹಾನಗರಪಾಲಿಕೆ ಆಡಳಿತ ಸುಸೂತ್ರವಾಗಿ ನಡೆಯಲಿದ್ದು, ಕುಡಿಯುವ ನೀರು ಪೂರೈಕೆ ಬೇಸಿಗೆಯಲ್ಲಿ ಅಬಾಧಿತವಾಗಿರಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರಪಾಲಿಕೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
            ಪಾಲಿಕೆ ಯು ತನ್ನೆಲ್ಲ ಕರ್ತವ್ಯ ಗಳನ್ನು ನಿರ್ವ ಹಿಸಲಿದ್ದು, ಪ್ರಗತಿ ಯಲ್ಲಿ ರುವ ಕಾಮ ಗಾರಿ ಗಳು ಮುಂದು ವರಿಯ ಲಿವೆ ಎಂದು ಜಿಲ್ಲಾಧಿ ಕಾರಿಗಳು ಹೇಳಿದರು. ನಿಯ ಮಿತವಾಗಿ ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳುವೆ ಎಂದ ಅವರು, ತ್ಯಾಜ್ಯ ವಿಲೇಗೆ ಹೆಚ್ಚಿನ ಒತ್ತು ನೀಡ ಲಿದ್ದು ನಗರ ಶುಚಿತ್ವ ಮತ್ತು ತ್ಯಾಜ್ಯ ವಿಲೇಗೆ ಕಟ್ಟು ನಿಟ್ಟಿನ ಕ್ರಮ ಕೈಗೊ ಳ್ಳುವೆನು ಎಂದರು. ಪಾಲಿಕೆ ಆಯುಕ್ತ ರಾದ ಡಾ ಹರೀಶ್ ಕುಮಾರ್, ಜಂಟಿ ಆಯುಕ್ತ ರಾದ ಶ್ರೀಕಾಂತ್, ಅಧೀಕ್ಷಕ ಅಭಿಯಂತರರಾದ ಬಿ ಎಸ್ ಬಾಲಕೃಷ್ಣ , ಪಾಲಿಕೆ ಇಂಜಿನಿಯರ್ ಗಳು ಮತ್ತು ಪಾಲಿಕೆಯ ವಿವಿಧ ಇಲಾಖಾ ಮುಖ್ಯಸ್ಥರು ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು.