Friday, February 8, 2013

ಸಾಮಾಜಿಕ ಪಿಡುಗು ನಿವಾರಿಸಲು ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು, ಫೆಬ್ರವರಿ.08 : ಮಾದಕ ದ್ರವ್ಯ ಸೇವನೆ ಪ್ರಮುಖ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ನಿವಾರಣೆ ಹೊಣೆ ಸಮಾಜದ್ದು; ಸಮಸ್ಯೆ ನಿವಾರಣೆಗೆ ಎಲ್ಲರೂ ಪರಸ್ಪರ ಸಹಕಾರ ಹಾಗೂ ಹಾಗೂ ಜವಾಬ್ದಾರಿಯುತವಾಗಿ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಹೇಳಿದರು.
ಇಂದು ಪೊಲೀಸ್ ಅತಿಥಿ ಗೃಹದ ಸಭಾಂ ಗಣದಲ್ಲಿ ಆಯೋ ಜಿಸ ಲಾದ ಪ್ರಾಂಶು ಪಾಲರ ಮತ್ತು ಸರ್ಕಾ ರೇತರ ಸಂಘ ಸಂಸ್ಥೆ ಗಳ ಪ್ರತಿ ನಿಧಿ ಗಳ ಸಭೆ ಯನ್ನು  ಉದ್ದೇ ಶಿಸಿ ಮಾತ ನಾಡು ತ್ತಿದ್ದ ಅವರು, ಮೇಲ್ಕಂಡ ಸಮ ಸ್ಯೆಗೆ ಒಂದಂ ಶದ ಪರಿ ಹಾರ ಅಸಾಧ್ಯ. ಮಕ್ಕಳ ಭವಿಷ್ಯ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದರು. ಹೊಣೆಯರಿತು ವರ್ತಿಸುವುದರಿಂದ ಸಮಸ್ಯೆ ಪರಿಹಾರ ಸಾಧ್ಯ ಎಂದರು.
ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಪೊಲೀಸ್ ಕಮಿಷ ನರ್ ಮನೀಷ್ ಕರ್ಬಿ ಕರ್ ಅವರು, ಬದಲಾ ಗುತ್ತಿ ರುವ ಸಾಮಾ ಜಿಕ ವ್ಯವಸ್ಥೆ ಮತ್ತು ಮಕ್ಕಳ ಬೆಳವ ಣಿಗೆಯ ವಾತಾ ವರಣ ಇಂತಹ ಕು ಕೃತ್ಯ ಗಳಿಗೆ ಪೂರಕ ವಾಗಿದ್ದು, ಸುಲಭ ಹಣ ದಿಂದ ವಿದ್ಯಾರ್ಥಿ ಗಳಿಗೆ ಮಾದಕ ವಸ್ತು ಖರೀದಿ ಸಾಧ್ಯ ವಾಗಿದೆ ಎಂದರು.
ಮಾದಕ ವಸ್ತು ಲಭ್ಯತೆ, ಒತ್ತಡದ ವಾತಾವರಣ, ಸಮಾಜ ವಿರೋಧಿ ಚಟುವಟಿಕೆ ಬಗ್ಗೆ ಅಪರಿಮಿತ ಧೈರ್ಯ ಈಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು ಮಕ್ಕಳ ನಕಾರಾತ್ಮಕ ಬೆಳವಣಿಗೆ ಬಗ್ಗೆ ಹೆತ್ತವರು ಮತ್ತು ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಇಂತಹ ಯಾವುದೇ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್ ಇಲಾಖೆಗೆ ತಿಳಿಸಿ ಎಂದು ಪೊಲೀಸ್ ಕಮಿಷನರ್ ಹೇಳಿದರು. ಜಿಲ್ಲೆಯ ಔಷಧ ನಿಯಂತ್ರಕರು (ಡ್ರಗ್ ಕಂಟ್ರೋಲರ್) ಈ ಬಗ್ಗೆ ಹೆಚ್ಷಿನ ಮುತುವರ್ಜಿ ವಹಿಸಬೇಕೆಂದು ಜಿಲ್ಲೆಯ ಮನೋರೋಗ ತಜ್ಞರಾದ ಡಾ ಅರುಣಾ ರಾವ್ ಅಭಿಪ್ರಾಯ ಪಟ್ಟರು. ಡಾ ರಮೀಲಾ ಶೇಖರ್ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.