Saturday, June 26, 2010

ದೇಶಕ್ಕೆ ಮಾದರಿ ಕರ್ನಾಟಕ ಪೊಲೀಸ್: ಡಾ.ಅಜಯ ಕುಮಾರ್ ಸಿಂಹ

ಮಂಗಳೂರು,ಜೂನ್ 26:ರಾಜ್ಯ ಪೊಲೀಸ್ ಇಲಾಖೆ ಉತ್ತಮ, ಜನಪರ ಕಾರ್ಯಗಳಿಂದ ರಾಷ್ಟ್ರದ ಗಮನವನ್ನು ಸೆಳೆದಿದ್ದು ಪ್ರಧಾನಿ ಹಾಗೂ ಗೃಹ ಸಚಿವರಿಂದ ಪ್ರಶಂಸೆಯನ್ನು ಪಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಮತ್ತು ಮಹಾನಿರ್ದೇಶಕರಾದ ಡಾ.ಅಜಯ ಕುಮಾರ್ ಸಿಂಹ ಹೇಳಿದರು.

ಅವರಿಂದು ನಗರದಲ್ಲಿ ಕಮಿಷನರೇಟ್ ಕಟ್ಟಡದ ಉದ್ಘಾಟನಾ ಸಮಾ ರಂಭದಲ್ಲಿ ಮಾತ ನಾಡುತ್ತಾ, ಪೋಲಿಸ್ ಇಲಾಖೆ ಜನರ ಸಹಕಾರ ಹಾಗೂ ಜನಪರ ನಡೆಯಿಂದ ಜನ ಸ್ನೇಹಿ ಯಾಗಿದ್ದು ಇತರ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸ ಬೇಕೆಂದು ಕೇಂದ್ರ ಗೃಹ ಸಚಿವರು ಇತರ ರಾಜ್ಯಗಳ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.ಜನರಿಂದ ದೂರು ಸ್ವೀಕರಿಸುವ ರೀತಿ, ಕಳವಾದ ವಸ್ತುಗಳನ್ನು ನ್ಯಾಯ ಲಯದಿಂದ ಪಡೆದು ಫಿರ್ಯಾದು ದಾರರಿಗೆ ತಲುಪಿಸಲು ಕೈಗೊಂಡ ಕ್ರಮಕ್ಕ ಜನತೆಯಿಂದ ಶ್ಲಾಘನೆ ವ್ಯಕ್ತವಾಗಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ 53 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಅದರ ಮಾಲಿಕರಿಗೆ ಹಿಂದಿರುಗಿಸ ಲಾಗಿದೆ. ಕಮಿಷನರೇಟ್ ಕಚೇರಿಯನ್ನು ಪ್ರವೇಶಿಸುವ ಪ್ರದೇಶದಲ್ಲಿ ದೂರುಗಳನ್ನು ಹಿಡಿದು ಬರುವವರ ನೋವಿಗೆ ಸ್ಪಂದಿಸಲು ದೂರುಗಳನ್ನು ಸ್ವೀಕರಿಸಿ, ಹಿಂಬರಹ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತೀ 3ನೇ ಭಾನುವಾರ ಪೊಲೀಸ್ ಸ್ಟೇಷನ್ ನಲ್ಲಿ ಜನಸ್ಪಂದನ ದಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯ ಪೊಲೀಸ್ ಇಲಾಖೆ ತನ್ನ ನಗುಮೊಗದ ಸೇವೆಯಿಂದ ಜನಪ್ರಿಯ ವಾಗುತ್ತಿದೆ. ಜನರ ನಂಬುಗೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಇಲಾಖೆ ಮುಂದುವರಿಸಬೇಕು ಎಂದು ಅವರು ಹೇಳಿದರು.