Sunday, June 13, 2010

ಕಡಲ್ಕೊರೆತ ತಡೆಯಲು 911 ಕೋಟಿ ರೂ.ಗಳ ವಿಶೇಷ ಯೋಜನೆ: ಸಚಿವ ಕೃಷ್ಣ ಜೆ.ಪಾಲೇಮಾರ್

ಮಂಗಳೂರು, ಜೂ. 13: ಸರ್ಕಾರ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತವನ್ನು ತಡೆಗಟ್ಟಲು ಕೇಂದ್ರ ಸರಕಾರದ ಸಹಕಾರದೊಂದಿಗೆ 911 ಕೋಟಿ ರೂಪಾಯಿಗಳ ಶಾಶ್ವತ ಯೋಜನೆಯನ್ನು ರೂಪಿಸಿದ್ದು,ಸೆಪ್ಟೆಂಬರ್ ತಿಂಗಳಿನಿಂದ ಕಾಮಾಗಾರಿ ಆರಂಭವಾಗಲಿದೆ ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುರಿವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಹೇಳಿದರು.
ಇಂದು ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಪತ್ರಕರ್ತರ ಜತೆ ಮಾತ ನಾಡುತ್ತಾ, ಕಳೆದ ವರ್ಷ ತಾತ್ಕಾಲಿಕವಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರದ ತಟಕ್ಕೆ ಬಂಡೆ ಕಲ್ಲು, ಗೋಣಿ ಚೀಲವನ್ನು ಹಾಕಿ ಕಡಲ್ಕೊರೆತ ತಡೆಯಲು ಪ್ರಯತ್ನಿಸಲಾಗಿತ್ತು.ಅದು ಹೆಚ್ಚಿನ ಪ್ರಯೋಜನ ಬೀರದ ಕಾರಣ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲೆಗಿತ್ತು.ಇದೀಗ ಎಡಿಬಿ ನೆರವಿನೊಂದಿಗೆ 911 ಕೋಟಿ ರೂಪಾಯಿಗಳ ಯೋಜನೆಗೆ ತಾತ್ವಿಕ ಒಪ್ಪಿಗೆ ದೊರೆತ್ತಿದೆ. ಜರ್ಮನ್ ತಾಂತ್ರಿಕತೆಯ ಈ ಯೋಜನೆಯಿಂದ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಗಟ್ಟಲಾಗುವುದು.ಪ್ರಥಮ ಹಂತದಲ್ಲಿ ಉಳ್ಳಾಲಕ್ಕೆ 223 ಕೋಟಿ ರೂಪಾಯಿ ಮಂಜೂರು ಮಾಡಲಾಗುತ್ತದೆ.ಮಳೆಗಾಲ ಕಳೆದ ಕೂಡಲೇ ಸೆಪ್ಟೆಂಬರಿನಿಂದ ಈ ಕಾಮಗಾರಿ ಆರಂಭ ಗೊಳ್ಳಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ 75:25 ಅನು ಪಾತದಲ್ಲಿ ನಡೆಯಲಿರುವ ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಉಳ್ಳಾಲ ಸಹಿತ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಸ್ಥಳಿಯ ಶಾಸಕ ಯು. ಟಿ. ಖಾದರ್, ಉಳ್ಳಾಲ ಪುರ ಸಭೆಯ ಅಧ್ಯಕ್ಷ ಇಸ್ಮಾಯೀಲ್, ಉಪಾಧ್ಯಕ್ಷ ದಿನೇಶ್ ರೈ, ಜಿಲ್ಲಾ ಪಂಚಾ ಯತ್ ಸದಸ್ಯೆ ಸುಷ್ಮಾ ಜನಾರ್ಧನ್, ಕೌನ್ಸಿಲರ್ ಗಳಾದ ಮುಹ ಮ್ಮದ್ ಮುಕ್ಕಚೇರಿ, ಸ್ಟೆಲ್ಲಾ ಡಿಸೋಜ, ಮುಸ್ತಫಾ, ರಝಿಯಾ ಇಬ್ರಾಹಿಂ, ಕುಂಞಿಮೋನು,ಮತ್ತು ಬಂದರು ಅಧಿಕಾರಿಗಳು ಉಪಸ್ಥಿತರಿದ್ದು ಸಚಿವರಿಗೆ ಅಗತ್ಯ ಮಾಹಿತಿ ನೀಡಿದರು.