Friday, June 4, 2010

ಮಂಗಳೂರಿನ ಛಾಯಾಗ್ರಾಹಕರಿಗೆ ಕೆನಾನ್ ಪ್ರಶಸ್ತಿ

ಮಂಗಳೂರು,ಜೂನ್ 4: "ರಾಜಕೀಯ ಮತ್ತು ರಾಜಕಾರಣಿಗಳು" ಎಂಬ ವಿಷಯದಡಿ ಪ್ರಖ್ಯಾತ ಕ್ಯಾಮರಾ ಕಂಪೆನಿ ಕೆನಾನ್ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರಿನ ಇಬ್ಬರು ಪತ್ರಿಕಾ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸಿದೆ.
ಪ್ರಥಮ ಪ್ರಶಸ್ತಿಯನ್ನು ಟೈಮ್ಸ್ ಆಫ್ ಇಂಡಿಯಾ ಮಂಗಳೂರು ಆವೃತ್ತಿಯ ಹಿರಿಯ ಛಾಯಾ ಗ್ರಾಹಕ ರವಿ ಪೊಸವಣಿಕೆ, 4 ನೇ ಪ್ರಶಸ್ತಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಹಿರಿಯ ಛಾಯಾ ಗ್ರಾಹಕ ಜಿ.ಕೆ. ಹೆಗಡೆ ಅವರು ಪಡೆದು ಕೊಂಡಿದ್ದಾರೆ.ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 60 ಪತ್ರಿಕಾ ಛಾಯಾಗ್ರಾಹಕರು 176 ಚಿತ್ರಗಳೊಂದಿಗೆ ಭಾಗವಹಿಸಿದ್ದರು. ಜೂನ್ 2 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೆನಾನ್ ಇಂಡಿಯಾದ ಉಪಾಧ್ಯಕ್ಷ ಅಲೋಕ್ ಭಾರಾಧ್ವಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.