Monday, June 14, 2010

ಮೀನುಗಾರಿಕಾ ಬಂದರು 3 ನೇ ಹಂತ ಯೋಜನೆ 57 ಕೋಟಿ ರೂ.; ಸಚಿವ ಪಾಲೇಮಾರ್

ಮಂಗಳೂರು,ಜೂನ್ 14:ಮೀನುಗಾರರ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು,ಮಂಗಳೂರು ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಗೆ ವಿಶೇಷ ಯೊಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಹೇಳಿದರು.

ಬೆಂಗ್ರೆ ಪ್ರದೇಶದಿಂದ ಮಂಗಳೂರು ನಗರಕ್ಕೆ ಫೆರ್ರಿ ಸೌಲಭ್ಯ ಒದಗಿ ಸುತ್ತಿರುವ ಬೆಂಗ್ರೆ ಮಹಾ ಜನಸಭಾ ತನ್ನ ರಜತಾ ಮಹೋ ತ್ಸವದ ಆಚರಣೆಯ ಸಂದರ್ಭದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 'ಜನನಿ ಗಂಗಾ' ಪ್ರಯಾಣಿಕರ ಬೋಟನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು,ಮಂಗಳೂರು ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣಾ ಯೋಜನೆಯನ್ನು ಸಿದ್ದಪಡಿಸಲಾಗಿದೆ. 57 ಕೋಟಿ ರೂಪಾಯಿಗಳ ಯೋಜನೆಯನ್ನು ಅನು ಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.ಶೀಘ್ರದಲ್ಲೇ ಈ ಕಾಮಗಾರಿ ಆರಂಭ ವಾಗಲಿದೆ ಎಂದರು.ಬೆಂಗ್ರೆ ಮತ್ತು ಧಕ್ಕೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಜೆಟ್ಟಿ ನಿರ್ಮಾಣ ಮಾಡಲು 20 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಿದೆ. ಈ ಎರಡು ಪ್ರದೇಶಗಳನ್ನು ಸಂಪರ್ಕಿಸುವ ಬಹು ನಿರೀಕ್ಷಿತ ತೂಗು ಸೇತುವೆ ನಿರ್ಮಾಣ ಮಾಡಲು 40 ಲಕ್ಷ ರೂಪಾಯಿ ಗಳನ್ನು ಬಿಡುಗಡೆ ಯಾಗಿದ್ದು, ಉಳಿದ ಹಣ ಹಂತ ಹಂತವಾಗಿ ನೀಡಲಾಗುವುದು ಎಂದರು. ಮನಪಾ ಸದಸ್ಯೆ ಶಕುಂತಲ ಡಿ.ಕರ್ಕೇರಾ, ಫೆರ್ರಿ ಅಧ್ಯಕ್ಷ ಚೇತನ್ ಬೆಂಗ್ರೆ,ಮಹಾ ಜನ ಸಂಘದ ಅಧ್ಯಕ್ಷ ವಿಜಯ ಬೆಂಗ್ರೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.