Monday, June 21, 2010

ದ.ಕ. ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ: 5 ಗ್ರಾ. ಪಂ. ಗಳಲ್ಲಿ ಪೈಲೆಟ್ ಪ್ರಾಜೆಕ್ಟ್

ಮಂಗಳೂರು, ಜೂ.21: ಅತಿವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದ ತ್ಯಾಜ್ಯ ವಿಲೇವಾರಿ ಆಡಳಿತಕ್ಕೆ ಸವಾಲಾಗಿರುವ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಶ್ರಮವಹಿಸುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಪಾಲಿಕೆ ತ್ಯಾಜ್ಯ ವಿಲೇಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಲ್ಲದೆ ಅನುಷ್ಠಾನಕ್ಕೆ ತಂದು ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ಪ್ರಶಂಸಾರ್ಹ ಮಾದರಿಗಳನ್ನು ರೂಪುಗೊಳಿಸಿದ್ದು, ಜಿಲ್ಲೆಯ 5 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೈಲೆಟ್ ಯೋಜನೆಯಾಗಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ರೂಪಿಸಲು ಯೋಜಿಸಿದೆ.

ಜೂನ್ 21ರಂದು ಮೈಸೂರಿನ ಭಗೀರಥ ಸಂಸ್ಥೆ ಗೋಳ್ತ ಮಜಲಿನಲ್ಲಿ ಈ ಸಂಬಂಧ ಗ್ರಾಮ ಪಂಚಾಯಿತಿಗೆ ತರಬೇತಿಯನ್ನು ಆರಂಭಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಶಿವಶಂಕರ್ ಅವರು ಮಾಹಿತಿ ನೀಡಿದರು.
ಯೋಜನೆ ಗಳನ್ನು ಆರಂಭಿಸುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಕ್ರಿಯವಾಗಿ ಆ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೇಲೆ ಯೋಜನೆಯ ಫಲಾಫಲಗಳು ಅಡಗಿವೆ. ಹಾಗಾಗಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿ ಸಿದಂತೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಆರಂಭಿಸುತ್ತಿದ್ದು ಜನರ ಪಾಲ್ಗೊಳ್ಳು ವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲೆಯ ಗೋಳ್ತಮಜಲು, ಧರ್ಮಸ್ಥಳ, ಕಟೀಲು/ಕಿನ್ನಿಗೋಳಿ,ಕೊಣಾಜೆ,ಸುಬ್ರಮಣ್ಯ ಪ್ರದೇಶಗಳಲ್ಲಿ ಇಂತಹ ಘಟಕಗಳನ್ನು ಆರಂಭಿಸಲು ಪೈಲೆಟ್ ಯೋಜನೆ ಗಳನ್ನು ರೂಪಿಸ ಲಾಗಿದೆ ಎಂದರು.
ಈ ಸಂಬಂಧ ಸಾಕಷ್ಟು ಪೂರ್ವ ತಯಾರಿಯನ್ನು ಜಿಲ್ಲಾ ಪಂಚಾಯತ್ ನಡೆಸಿದ್ದು, ಜಿಲ್ಲಾ ನೆರವು ಘಟಕದ ಅಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಮೈಸೂರಿನ ಜೆ ಎಸ್ ಎಂ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಈ ಯೋಜನೆ ಗಳನ್ನು ಸ್ಥಳೀಯ ವಾತಾವರಣಕ್ಕೆ ಹೊಂದಿ ಕೊಳ್ಳುವಂತೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ.
ಜಪಾನ್ ಮೂಲದ ಜೆ ಎಂ ಎಸ್ ಟೆಕ್ನಾಲಜಿ ಮೈಸೂರಿನಲ್ಲಿ ಟ್ರೀಟ್ ಮೆಂಟ್ ಪ್ಲಾಂಟ್ನ್ನು ಆರಂಭಿಸಿದ್ದು ಮಲಿನ ಕೊಳಗಳ ನೀರನ್ನು ಶುದ್ಧೀಕರಿಸಿ ಮರು ಉಪಯೋಗಿಸಲು ಅರ್ಹವಾಗಿಸುವ ರೀತಿ ಪರಿವರ್ತಿಸಲಾಗಿದೆ. ಈ ಬಗ್ಗೆ ಸವಿವರ ಮಾಹಿತಿ ನೀಡಿದ ಅಸಿಸ್ಟೆಂಟ್ ಸೆಕ್ರೆಟರಿಯವರು, ಬಯೋ ಟೆಕ್ನಾಲಜಿ ಯಿಂದಾಗುವ ಅನುಕೂಲಗಳನ್ನು ವಿವರಿಸಿದರಲ್ಲದೆ, ಜೀವ ಸಂಕುಲಕ್ಕೆ ಉಪಕಾರಿಯಾಗುವ ಬ್ಯಾಕ್ಟೀರಿಯಾಗಳಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದುರ್ವಾಸನೆಯಂತೂ ಇಲ್ಲವೇ ಇಲ್ಲ. ಈ ಬ್ಯಾಕ್ಟೀರಿ ಯಾಗಳಿಗೆ ತ್ಯಾಜ್ಯ ವಸ್ತುಗಳೇ ಮುಖ್ಯ ಆಹಾರ.ಮೈಸೂರಿನಲ್ಲಿ ಮಲಿನ ಕೊಳಗಳನ್ನು ಸ್ವಚ್ಛಗೊಳಿಸಲು ಚರ್ನರ್ಸ್ (ಕಡೆಗೋಲು ಮಾದರಿ ಯಂತ್ರಗಳು) ಪ್ಲಾಂಟ್ಗಳಿಗೆ ಅಳವಡಿ ಸಲಾಗಿದೆ. (ಬಯೋಟೆಕ್) ಜೈವಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ ಬ್ಯಾಕ್ಟೀರಿ ಯಾಗಳು ತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಬ್ಯಾಕ್ಟೀರಿ ಯಾಗಳು ಮಲಿನವನ್ನು ತಿಂದು ವಾತಾವರಣಕ್ಕೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಜೆ ಎಂ ಎಸ್ ನವರು ರೂಪಿಸಿದ ಜೈವಿಕ ಮಾದರಿಯಿಂದ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ದುರ್ನಾತವಾಗಲೀ, ಕಾಗೆ, ಹದ್ದುಗಳಾಗಲಿ ಇಲ್ಲ. ಇಲ್ಲಿ ಉತ್ಪಾದನೆಯಾದ ಗೊಬ್ಬರಗಳನ್ನು ಇಫ್ಕೋ ಸಂಸ್ಥೆ ಕೆ ಜಿ ಒಂದಕ್ಕೆ 4 ರೂ.ಗಳಂತೆ ಖರೀದಿಸುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ಪರಿಹಾರಕ್ಕೆ ಜೆ ಎಂ ಎಸ್ ಕಂಪೆನಿ ಪರಿಹಾರ ಕಂಡು ಹುಡುಕಿದೆ. ಘಟಕಗಳ ಕಾರ್ಯ ನಿರ್ವಹಣೆಗೆ ವಿದ್ಯುತ್ ನ ಅಗತ್ಯವಿಲ್ಲ. ಅತಿ ಕಡಿಮೆ ಕಾರ್ಮಿಕ ಶಕ್ತಿ ಬಳಕೆ. ತಂತ್ರಜ್ಞರ ಅಗತ್ಯವಿಲ್ಲ. ಪರಿಸರ ಸ್ನೇಹಿ. ಪ್ರಕ್ರಿಯೆಯ ಬಳಿಕ ಮತ್ತೆ ಕಲ್ಮಶಗಳನ್ನು ವಾತಾವರಣಕ್ಕೆ ಬಿಡುವ ಸಾಧ್ಯತೆಗಳಿಲ್ಲವೇ ಇಲ್ಲ. ನಿರ್ವಹಣೆ ವೆಚ್ಚ ಅತಿ ಕಡಿಮೆ; ಆದರೆ ಈ ಪ್ರಕ್ರಿಯೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಆಸಕ್ತಿ ಕಳೆದು ಕೊಳ್ಳದಿರುವಿಕೆ ಅತಿ ಮುಖ್ಯವಾಗಿದ್ದು ಕಸದಿಂದ ರಸ ಇಂದಿನ ಅಗತ್ಯವೂ ಆಗಿದೆ.
ಕಸದ ವಿಲೇವಾರಿ ಸಂಗ್ರಹಕ್ಕೆ ಸ್ಥಳ ನಿಗದಿಪಡಿಸುವ ವಿಷಯದಲ್ಲಿ ಜಿಲ್ಲೆಯಲ್ಲಿ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತ ವಾಗುತ್ತಿರುವ ಹಿನ್ನಲೆಯಲ್ಲಿ ಇಂತಹ ದುರ್ವಾಸ ನೆಯಿಂದ ಮುಕ್ತ ತ್ಯಾಜ್ಯ ಘಟಕಗಳು ಜನಸ್ನೇಹಿ ಯಾಗಲು ಸಾಧ್ಯ. ಆದರೆ ನಿರಂತರತೆ ಮತ್ತು ಜನರ ಸಹಕಾರ ಯೋಜನೆಯ ಯಶಸ್ಸಿಗೆ ಅಗತ್ಯ ಎಂದು ಸಿಇಒ ಅವರ ಅಭಿಪ್ರಾಯ. ಯೋಜನೆಗಳು ತಳಮಟ್ಟದಿಂದ ರೂಪುಗೊಂಡದ್ದು ಇನ್ನೊಂದು ಪ್ರಶಂಸಾರ್ಹ ಸಂಗತಿ.