Thursday, June 17, 2010

ಕೃತಕ ನೆರೆಗೆ ಕಾರಣವಾದ ಅತಿಕ್ರಮಣ ತೆರವು

ಮಂಗಳೂರು, ಏಪ್ರಿಲ್ 17:ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಕಣ್ಣೂರು, ಪಡೀಲು, ಅಡ್ಯಾರು, ಉಜ್ಜೋಡಿ ಪ್ರದೇಶಗಳು ನೀರಿನಿಂದಾ ವೃತವಾಗಿದ್ದು, ನಿವಾಸಿಗಳ ತುರ್ತು ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣವೇ ನೆರೆ ಪೀಡಿತ ಜಾಗಗಳಿಗೆ ತೆರಳಿ ಪರಿಶೀಲನೆ ನಡೆಸಿ ನೀರು ಹೋಗಲು ನಿರ್ಮಿಸಿದ್ದ ತೋಡುಗಳ ಮೇಲಿನ ನಿರ್ಮಾಣ ತೆರವಿಗೆ ಕ್ರಮ ಕೈಗೊಂಡರು.
ಉಜ್ಜೋಡಿಯ ನಿರ್ಮಲಾ ಸರ್ವಿಸ್ ಸ್ಟೇಷನ್, ರೋನ್ಸನ್ ಸರ್ವಿಸ್ ಸ್ಟೇಷನ್ ಚರಂಡಿಯನ್ನು ಅತಿಕ್ರಮಿಸಿ ನಿರ್ಮಾಣ ಮಾಡಿದ್ದ ಅತಿಕ್ರಮಗಳನ್ನು ಪಾಲಿಕೆಯಿಂದ ಜೆಸಿಬಿ ತರಿಸಿ ಒಡೆಸಿ ಹಾಕಿಸಿದರಲ್ಲದೆ, ತೋಡುಗಳನ್ನು ತೆರವು ಗೊಳಿಸಿ ನೀರು ಹೋಗಲು ಅವಕಾಶ ಮಾಡಿ ಕೊಡಲಾಯಿತು. ಇಂತಹುದೇ ಅತಿಕ್ರಮಣ ಗಳಿಂದ ಹಲವು ಕಡೆ ನೀರು ನಿಲ್ಲುತ್ತಿದ್ದು, ಪಡೀಲು ಅಡ್ಯಾರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ದಿಂದಲೂ ಸರಾಗ ನೀರು ಹರಿಯಲು ತೊಂದರೆ ಯಾಗಿದ್ದು, ಪ್ರಾಧಿಕಾ ರದವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ನಿರ್ದೆಶಿಸಿದರು. ಮೇಯರ್ ರಜನಿ ದುಗ್ಗಣ್ಣ ಈ ಸಂದರ್ಭದಲ್ಲಿ ಜೊತೆಗಿದ್ದು ಜನತೆಯ ಸಮಸ್ಯೆ ಆಲಿಸಿದರು.