Wednesday, June 16, 2010

ನಗರ ಹಸಿರೀಕರಣ: ನಾಗರೀಕರಿಗೆ ಉಚಿತ ಗಿಡ

ಮಂಗಳೂರು,ಜೂ.16:ನಗರೀ ಕರಣದಿಂದ ವಾತಾ ವರಣದ ಉಷ್ಣತೆ ಹೆಚ್ಚುತ್ತಿದ್ದು, ಪರಿಸರ ಸಮತೋ ಲನವನ್ನು ಕಾಯ್ದು ಕೊಳ್ಳಲು ಅರಣ್ಯ ಇಲಾಖೆ 20,000 ಗಿಡಗಳನ್ನು ನಗರದಲ್ಲಿ ನೆಟ್ಟು ಬೆಳೆಸಲು ಉದ್ದೇಶಿಸಿದೆ ಎಂದು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ವಿಜಯ ಕುಮಾರ್ ತಿಳಿಸಿದರು.
ಅವರಿಂದ ಈ ಸಂಬಂಧದ ಪತ್ರಿಕಾ ಗೋಷ್ಠಿಯಲ್ಲಿ ನಾಗರೀಕರ ಸಹಕಾರವನ್ನು ಕೋರಿದ್ದು, ನಗರದಲ್ಲಿ ಮರಗಳನ್ನು ಬೆಳೆಸಲು 20 ವಿಧದ ಸಸಿಗಳನ್ನು ಸಿದ್ದಪಡಿಸಲಾಗಿದ್ದು, ಬಾದಾಮ, ಹಲಸು,ಹೆಬ್ಬಲಸು, ದೇವದಾರು, ಧೂಪ ಹಾಗೂ ಹೂಮರಗಳಿವೆ.
ಶಾಲಾ ಕಾಲೇಜು ಗಳಲ್ಲಿ, ಸಂಸ್ಥೆಗಳ ಆವರಣದಲ್ಲಿ, ಕೈಗಾರಿಕಾ ಆವರಣ ಗಳಲ್ಲಿ ಗಿಡಗಳನ್ನು ಬೆಳೆಸ ಲಾಗುವುದು. ಮಹಾ ನಗರ ಪಾಲಿಕೆ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೋರಿದೆ. ಪಡೀಲು ನರ್ಸರಿಯಲ್ಲಿ ಗಿಡಗಳು ಲಭ್ಯವಿದೆ. ಅರಣ್ಯ ಇಲಾಖೆ ಬಳಿ ನಾಗರೀಕರು ಸಸಿಗಳನ್ನು ಕೇಳಿದರೆ ತಕ್ಷಣದಲ್ಲೇ ಒದಗಿಸ ಲಾಗುವುದು ಎಂದರು.