Wednesday, June 2, 2010

ಗುರುತುಸಿಗದ 12 ಮೃತದೇಹಗಳಿಗೆ ಜಿಲ್ಲಾಡಳಿತದಿಂದ ಅಂತ್ಯ ಸಂಸ್ಕಾರ




ಮಂಗಳೂರು, ಜೂ.2: ಬಜಪೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟು ಗುರುತಿಸ ಲಾಗದೆ ಉಳಿದ 12 ಶವಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಇಂದು ಅಂತಿಮ ಸಂಸ್ಕಾರ ನೆರವೇರಿಸಿತು. ವಿವಿಧ ಧರ್ಮಗಳ ಮುಖಂಡರು ಹಾಗೂ ಮೃತರ ಕುಟುಂಬಗಳ ಸಮ್ಮುಖದಲ್ಲಿ ಸರಕಾರಿ ಗೌರವ ದೊಂದಿಗೆ ಕೂಳೂರು ಸೇತುವೆ ಬಳಿ ಸಾಮೂಹಿಕ ವಾಗಿ ಅಂತ್ಯ ಸಂಸ್ಕಾರ ನೆರ ವೇರಿಸ ಲಾಯಿತು.