Wednesday, June 9, 2010

ಮಂಗಳೂರಿಗರಿಗೆ ಒಂದೇ ಸೂರಿನಡಿ ಹಲವು ಸೇವೆಗೆ 'ಮಂಗಳೂರು ಒನ್'

ಮಂಗಳೂರು,ಜೂ.9:ಮಂಗಳೂರಿನ ನಾಗರೀಕರಿಗೆ ಒಂದೇ ಸೂರಿನಡಿ ಹಲವು ಸೇವೆಗಳನ್ನು ನೀಡಲು ನಗರದ 3 ಕಡೆಗಳಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ 3 ಮಂಗಳೂರು ಒನ್ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ನಾಗರೀಕರ ಸೇವೆಗಾಗಿ ಮನಾಪದ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ನ ಪಾಲೆಮಾರ್ ಅವರು ಇಂದು ಸೇವಾ ಕೇಂದ್ರವನ್ನು ಉದ್ಘಾಟಿಸಿ, ದೇಶಕ್ಕೆ ದಕ್ಷಿಣ ಕನ್ನಡ ಮಾದರಿಯಾಗಬೇಕೆಂದರು.ಕಾರ್ಯ ಕ್ರಮದಲ್ಲಿ ಉಪ ಸ್ಥಿತರಿದ್ದ ನಗರಾ ಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರು ಮಾತ ನಾಡಿ, ಕರ್ನಾಟಕ ಇ-ಗವರ್ನೆನ್ಸ್ ನಲ್ಲಿ ಅಗ್ರೇಸರ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.ಸೇವಾ ಕೇಂದ್ರವನ್ನು ಸದಾ ಸುಸ್ಥಿತಿ ಯಲ್ಲಿಡುವ ಬಗ್ಗೆ ಹಾಗೂ ಜನ ಸ್ನೇಹಿ ಯಾಗಿರಿಸಿ ಕೊಳ್ಳುವ ಬಗ್ಗೆ ಸಂಬಂಧ ಪಟ್ಟವರು ಜಾಗರೂ ಕರಾಗಿ ಕರ್ತವ್ಯ ನಿಭಾ ಯಿಸ ಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯೋಗೀಶ್ ಭಟ್ ಅವರು, ಭ್ರಷ್ಟಾಚಾರ ಮುಕ್ತ ಹಾಗೂ ಪಾರ ದರ್ಶಕ ವ್ಯವಸ್ಥೆಗೆ ಇ- ಆಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದರು.ಡಾ. ವಿ.ಎಸ್ .ಆಚಾರ್ಯ ಶುಭ ಹಾರೈಸಿದರು.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಮೇಯರ್ ರಜನಿ ದುಗ್ಗಣ್ಗ, ಉಪಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು. ಇ-ಆಡಳಿತ ಪ್ರಧಾನ ಕಾರ್ಯದರ್ಶಿ ಎಂ.ಎನ್ ವಿದ್ಯಾಶಂಕರ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಡಾ. ಕೆ.ಎನ್. ವಿಜಯ ಪ್ರಕಾಶ್ ಸ್ವಾಗತಿಸಿದರು. ಇ- ಆಡಳಿತದ ಸಿಇಒ ಡಾ. ಡಿ.ಎಸ್. ರವೀಂದ್ರನ್ ಧನ್ಯವಾದ ಸಮರ್ಪಿಸಿದರು.ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.