Wednesday, June 5, 2013

ವಿಶ್ವ ಹಾಲು ದಿನಾಚರಣೆ

ಮಂಗಳೂರು, ಜೂನ್.05: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ  ಆಶ್ರಯದಲ್ಲಿ 13 ನೇ ವಿಶ್ವ ಹಾಲು ದಿನಾಚರಣೆ ಮತ್ತು ಹಾಲು ಡೀಲರುಗಳ ಸನ್ಮಾನ ಕಾರ್ಯಕ್ರಮ ಕುಲಶೇಖರ ಡೇರಿ ಆವರಣದಲ್ಲಿ  ಮಂಗಳವಾರ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಓ. ಆರ್. ಶ್ರೀರಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ,ನಿರ್ದೇಶಕ ಕೆ. ಸೀತರಾಂ ರೈ, ಪಾಲಿಕೆ ಸದಸ್ಯ ಭಾಸ್ಕರ್ ಸಹಿತ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.